ಭರಮಸಾಗರ: ಪಟ್ಟಣದಲ್ಲಿ ಭಾನುವಾರ ಗುಡುಗು ಮಳೆಯಾಗಿದ್ದು, ಸಿಡಿಲು ಬಡಿದುವಿನಾಯಕ ಚಿತ್ರಮಂದಿರದ ಬಳಿಯಅಲ್ಲಾಬಕ್ಷ್ ಅವರ ಮನೆಯ ಗೋಡೆ ಬಿರುಕು ಬಿಟ್ಟಿದೆ.
ಸಿಡಿಲಿನ ಹೊಡೆತಅಲ್ಲಾಬಕ್ಷ್ ಅವರ ಮನೆಯ ಗೋಡೆ ಭಾಗ ಕೆಳಗೆ ಉದುರಿದೆ. ಮನೆಯಲ್ಲಿ 12 ಜನರು ಇದ್ದರು. ಯಾರಿಗೂ ಏನೂ ತೊಂದರೆ ಆಗಿಲ್ಲ. ವರ್ಷದ ಮೊದಲ ಮಳೆ ಆರ್ಭಟದಿಂದ ಬಂದಿದ್ದು ಭೂಮಿ ತಂಪಾಗಿದೆ. ಹೋಳಿ ಹಬ್ಬದ ಕಾಮದಹನ ನಂತರ ಬಂದ ಹನಿ ಮಳೆ ಮುಂದಿನ ಮಳೆಗಳ ಸಂಕೇತ ಎಂದು ಹಿರಿಯರು ಹೇಳಿದರು.
ಚಿಕ್ಕಬೆನ್ನೂರು ಗ್ರಾಮದ ರೈತ ಮಂಜುನಾಥ್ ಅವರ ಜಮೀನಿನಲ್ಲಿ ಮಾವಿನ ಗಿಡಗಳು ನೆಲಕಚ್ಚಿವೆ.