ಮೂರು ದಶಕಗಳಿಂದ ಸಾಹಿತ್ಯ ರಚನೆಯಲ್ಲಿ ತೊಡಗಿಕೊಂಡು ಕಥೆ, ವಿಮರ್ಶೆ, ನಾಟಕ, ಕಾವ್ಯ ಬರೆದಿರುವ ಅಗಸನಕಟ್ಟೆ ಅವರ ಎರಡನೇ ಕಾದಂಬರಿ ಇದಾಗಿದೆ. ಗಾಂಧೀಜಿ ಅವರಿಗೆ ಪ್ರಿಯವಾದ ‘ವೈಷ್ಣವ ಜನತೋ’ ಭಜನೆಯ ಶೀರ್ಷಿಕೆಯನ್ನು ಕಾದಂಬರಿಗೆ ಬಳಸಿಕೊಳ್ಳಲಾಗಿದೆ. ಚಿಂತಕರಾದ ಡಾ. ಕೆ.ವಿ.ನಾರಾಯಣ ಹಾಗೂ ರಾಜೇಂದ್ರ ಚೆನ್ನಿ ಅವರು ಬೆನ್ನುಡಿ ಬರೆದಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.