ಮಠದ ಪೀಠಾಧ್ಯಕ್ಷರು ಚಿನ್ನದ ಕಿರೀಟ, ಬಂಗಾರದ ಪಾದುಕೆ ಹಾಗೂ ಆಭರಣ ಧರಿಸಿ ರತ್ನಖಚಿತ ಸಿಂಹಾಸನದ ಪೀಠಾರೋಹಣ ಮಾಡುವುದು ಮಠದ ವಾಡಿಕೆಯಾಗಿತ್ತು. ಶಿವಮೂರ್ತಿ ಮುರುಘಾ ಶರಣರು ಚಿನ್ನದ ಬದಲು ರುದ್ರಾಕ್ಷಿ ಕಿರೀಟ ಧರಿಸುವ ಪರಂಪರೆ ಆರಂಭಿಸಿದರು. ಮರದ ಪಾದುಕೆ ಧರಿಸಿ, ಮರದ ಆಸನದ ಮೇಲೆ ಕುಳಿತು ಶೂನ್ಯಪೀಠಾರೋಹಣ ಮಾಡುತ್ತಿದ್ದರು.