ನಗರದಲ್ಲಿ ಉದ್ಯಾನಗಳ ನಿರ್ವಹಣೆ ಆಗುತ್ತಿಲ್ಲ ಎಂಬುದು ಗಮನದಲ್ಲಿದೆ. ಇದಕ್ಕೆ ಪೌರ ಕಾರ್ಮಿಕರ ಕೊರತೆ ಕಾರಣವಾಗಿದ್ದು ಇದು ನೀಗಿದ ಬಳಿಕ ಅವರಿಗೆ ಜವಾಬ್ದಾರಿವಹಿಸಲಾಗುತ್ತದೆ. ಅಲ್ಲಿಯವರೆಗೂ ಆದ್ಯತೆ ಅನುಸಾರ ಸ್ವಚ್ಛತಾ ಕಾರ್ಯ ನಡೆಸಲಾಗುತ್ತದೆ.ಬಿ.ಎನ್.ಸುಮಿತ ನಗರಸಭೆ ಅಧ್ಯಕ್ಷೆ
ಪೌರ ಕಾರ್ಮಿಕರ ಕೊರತೆಯಿಂದಾಗಿ ನಗರಸಭೆಯ ಉದ್ಯಾನಗಳ ನಿರ್ವಹಣೆ ಸವಾಲಾಗಿದೆ. ಕುಡಾದಿಂದ ಅಭಿವೃದ್ಧಿಪಡಿಸಿರುವ ಉದ್ಯಾನಗಳು ನಿರ್ವಹಣೆಯಿಲ್ಲದೆ ಸೊರಗಿವೆ. ಈ ಕಾರಣಕ್ಕೆ ಹಸ್ತಾಂತರ ಮಾಡಿಕೊಂಡಿಲ್ಲ. ಶೀಘ್ರ ಸಭೆ ನಡೆಸಿ ಇದಕ್ಕೆ ಪರಿಹಾರ ಕಲ್ಪಿಸಲಾಗುತ್ತದೆ.ಎಂ.ರೇಣುಕಾ ಪೌರಾಯುಕ್ತೆ
ಸರಿಯಾದ ಉದ್ಯಾನಗಳು ಇಲ್ಲದ ಕಾರಣ ವಾಯು ವಿಹಾರಿಗಳು ಮಕ್ಕಳು ಸಮಸ್ಯೆ ಅನುಭವಿಸುವಂತಾಗಿದೆ. ಗಿಡಮರಗಳಂತೂ ಯಾವ ಬಡಾವಣೆಗಳಲ್ಲೂ ಇಲ್ಲ. ಇನ್ನಾದರೂ ಉದ್ಯಾನಗಳ ಅಭಿವೃದ್ಧಿ ನಿರ್ವಹಣೆಯತ್ತ ಗಮನಹರಿಸಿದರೆ ಉತ್ತಮ. ಲೋಹಿತ್ ವಿದ್ಯಾರ್ಥಿ ಹೊಸದುರ್ಗಸರಿಯಾದ ಉದ್ಯಾನಗಳು ಇಲ್ಲದ ಕಾರಣ ವಾಯು ವಿಹಾರಿಗಳು ಮಕ್ಕಳು ಸಮಸ್ಯೆ ಅನುಭವಿಸುವಂತಾಗಿದೆ. ಗಿಡಮರಗಳಂತೂ ಯಾವ ಬಡಾವಣೆಗಳಲ್ಲೂ ಇಲ್ಲ. ಇನ್ನಾದರೂ ಉದ್ಯಾನಗಳ ಅಭಿವೃದ್ಧಿ ನಿರ್ವಹಣೆಯತ್ತ ಗಮನಹರಿಸಿದರೆ ಉತ್ತಮ. ಲೋಹಿತ್ ವಿದ್ಯಾರ್ಥಿ ಹೊಸದುರ್ಗ
ಸರಿಯಾದ ಉದ್ಯಾನಗಳು ಇಲ್ಲದ ಕಾರಣ ವಾಯು ವಿಹಾರಿಗಳು ಮಕ್ಕಳು ಸಮಸ್ಯೆ ಅನುಭವಿಸುವಂತಾಗಿದೆ. ಗಿಡಮರಗಳಂತೂ ಯಾವ ಬಡಾವಣೆಗಳಲ್ಲೂ ಇಲ್ಲ. ಇನ್ನಾದರೂ ಉದ್ಯಾನಗಳ ಅಭಿವೃದ್ಧಿ ನಿರ್ವಹಣೆಯತ್ತ ಗಮನಹರಿಸಿದರೆ ಉತ್ತಮ.ಲೋಹಿತ್ ವಿದ್ಯಾರ್ಥಿ ಹೊಸದುರ್ಗ
ಉದ್ಯಾನಕ್ಕೆ ಮಕ್ಕಳನ್ನು ಕಳುಹಿಸಲು ಭಯವಾಗುತ್ತಿದೆ. ನಿರ್ವಹಣೆಯಿಲ್ಲದೆ ಹಾಳಾಗಿದ್ದು ವಿಷಜಂತು ಕಾಟ ಹೆಚ್ಚಾಗಿದೆ. ಓಪನ್ ಜಿಮ್ ಸಾಮಗ್ರಿಗಳು ಮುರಿದು ಬಿದ್ದಿವೆ. ಜೋಕಾಲಿ ಕೆಳಗೆ ಹಾಕಿದ್ದ ಮರಳು ಕಾಣೆಯಾಗಿದೆ.ಎಸ್.ಪ್ರಕಾಶ್ ಸ್ಥಳೀಯರು ಚಿತ್ರದುರ್ಗ
ಪ್ರತಿ ವರ್ಷ ಬಜೆಟ್ನಲ್ಲಿ ಉದ್ಯಾನಕ್ಕೆ ಮೀಸಲಿರಿಸುವ ಅನುದಾನ ಏನಾಗುತ್ತೊ ಗೊತ್ತಾಗುತ್ತಿಲ್ಲ. ಕಸ-ಕಡ್ಡಿ ಕೊಚ್ಚೆ ಮಲೀನಗೊಂಡ ನೀರು ತುಂಬಿಕೊಂಡ ಸ್ಥಿತಿಯಲ್ಲಿವೆ. ಹಸಿರು ಪರಿಸರವನ್ನು ಹುಡುಕಿಕೊಂಡು ಹೋಗುವಂತಾಗಿದೆ.ಜಿ.ವಿ.ರಾಜಣ್ಣ ಸ್ಥಳೀಯರು ಚಳ್ಳಕೆರೆ
ನಗರಸಭೆ ಸದಸ್ಯರು ಉದ್ಯಾನಗಳ ಅಭಿವೃದ್ಧಿ ಬಗ್ಗೆ ಕಿಂಚಿತ್ತೂ ಯೋಚಿಸುತ್ತಿಲ್ಲ. ಇಡೀ ನಗರಕ್ಕೆ ಸಾಲುಮರದ ತಿಮ್ಮಕ್ಕ ಉದ್ಯಾನ ಆಸರೆಯಾಗಿದೆ. ಆದರೆ ಅಲ್ಲಿಗೆ ಮಕ್ಕಳನ್ನು ಕರೆದೊಯ್ಯಲು ₹ 200 ಆಟೊ ಬಾಡಿಗೆ ನೀಡಬೇಕು.ರೇಖಾ ಸ್ಥಳೀಯರು ಚಳ್ಳಕೆರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.