ಚಿತ್ರದುರ್ಗ: ‘ಹೃದಯ ಮತ್ತು ಶ್ವಾಸಕೋಶ ಕಾಯಿಲೆ ಸಂಬಂಧ (ಸಿಪಿಆರ್) ತರಬೇತಿಯನ್ನು ಒಟ್ಟು 3 ಲಕ್ಷ ಜನರಿಗೆ ಕೊಡುವ ಉದ್ದೇಶವಿದೆ’ ಎಂದು ಶರಣ ಸಂಸ್ಕೃತಿ ಉತ್ಸವ ಸಮಿತಿ ಕಾರ್ಯಾಧ್ಯಕ್ಷ ಕೆ.ಎಸ್. ನವೀನ್ ತಿಳಿಸಿದರು.
‘ಉತ್ಸವದ ಅಂಗವಾಗಿ ದೇಶದ ವಿಪತ್ತು ಬೆಂಬಲ ಕಾರ್ಯಪಡೆ, ಕೋವಿಡ್ ಇಂಡಿಯಾ ಅಭಿಯಾನ, ಹಾರ್ಟ್ ಅಂಡ್ ಸ್ಟ್ರೋಕ್ ಫೌಂಡೇಷನ್ ಆಫ್ ಇಂಡಿಯಾದ ವತಿಯಿಂದ ಅ. 4ರಿಂದ ಆರಂಭವಾಗುವ ತರಬೇತಿ 14ರವರೆಗೂ ನಡೆಯಲಿದೆ. ಈ ಮೂಲಕ ವಿಶ್ವ ದಾಖಲೆಯ ಗುರಿ ಹೊಂದಲಾಗಿದೆ’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.