ಇಂಗುವಿಕೆ ಹಾಗೂ ಬಿಸಿಲಿನ ತಾಪಕ್ಕೆ ಆವಿಯಾಗಿರುವ ಕಾರಣ ಕೆರೆಯಲ್ಲಿ ನೀರು ಕಡಿಮೆಯಾಗಿದೆ. ಜತೆಗೆ ಬಳ್ಳಾರಿ ಜಾಲಿಯ ಸೊಪ್ಪು ಸಂಪೂರ್ಣ ಕಳಚಿ ಬಿದ್ದು ನೀರು ಮಲಿನವಾಗಿ ದುರ್ನಾತ ಬೀರುತ್ತಿದೆ. ಯಾವ ಮಟ್ಟಿಗೆ ಎಂದರೆ ಕುರಿ, ದನಗಳೂ ಸಹ ನೀರು ಕುಡಿಯದಂತಹ ಸ್ಥಿತಿ ಇದೆ. ಇದರಿಂದ ಲಕ್ಷಾಂತರ ಮೀನುಗಳು ಮೃತಪಟ್ಟು ದಡದಲ್ಲಿ ತೇಲಾಡುತ್ತಿವೆ. ಸತ್ತಿರುವ ಕೆಲವು ಮೀನುಗಳು ನೀರಿನಲ್ಲೂ ತೇಲಾಡುತ್ತಿವೆ.