‘ಪೆಟ್ರೋಲಿಯಂ ಉತ್ಪನ್ನಗಳ ಸ್ಫೋಟ ಸಂಭವಿಸಿದಾಗ ಪೆಟ್ರೋಲಿಯಂ ಮತ್ತು ಸ್ಫೋಟಕ ಸುರಕ್ಷತಾ ಸಂಸ್ಥೆಯ (ಪಿಇಎಸ್ಒ) ತಜ್ಞರು ಪರಿಶೀಲಿಸಿ ವರದಿ ನೀಡಬೇಕು. ನಾಗಪುರ ಪುಣೆಯ ತಜ್ಞರು ಸ್ಥಳಕ್ಕೆ ಬಂದು ತಪಾಸಣೆ ಮಾಡಬೇಕು. ಆರ್.ಜಿ.ಹಳ್ಳಿಯ ವಿತರಣಾ ಕೇಂದ್ರದಲ್ಲಿ ನಡೆದ ಘಟನೆ ಬಹಳ ಗಂಭೀರ ಸ್ವರೂಪದಿಂದ ಕೂಡಿದ್ದು ಪಿಇಎಸ್ಒ ತಜ್ಞರು ವರದಿ ನೀಡಿದ ನಂತರವಷ್ಟೇ ಸಮಸ್ಯೆ ಬಗೆಹರಿಯಲಿದೆ’ ಎಂದು ಪೊಲೀಸರು ತಿಳಿಸಿದರು. ‘ಪೊಲೀಸ್ ವಿಚಾರಣೆಗೆ ಸಹಕಾರ ನೀಡುತ್ತಿದ್ದೇವೆ. ಸ್ಫೋಟದಲ್ಲಿ ಮೃತಪಟ್ಟವರ ಕುಟುಂಬ ಸದಸ್ಯರಿಗೆ ಪರಿಹಾರ ನೀಡುವ ಪ್ರಕ್ರಿಯೆಯೂ ನಡೆಯುತ್ತಿದೆ. ಎಲ್ಲವೂ ಪೂರ್ಣಗೊಂಡ ನಂತರ ಸಿಎನ್ಜಿ ವಿತರಣಾ ಕೇಂದ್ರ ಸಹಜ ಸ್ಥಿತಿಗೆ ಮರಳಲಿದೆ’ ಎಂದು ವಿತರಣಾ ಕೇಂದ್ರ ನಿರ್ವಹಣೆ ಮಾಡುತ್ತಿರುವ ಯೂನಿಸನ್ ಎನ್ವಿರೋ ಪ್ರೈವೇಟ್ ಲಿಮಿಟೆಡ್ ಏಜೆನ್ಸಿ ಸಿಬ್ಬಂದಿ ತಿಳಿಸಿದರು.