ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕನಾಥೇಶ್ವರಿ-ಯಲ್ಲಮ್ಮ ದೇವಿಯ ಹೊಳೆ ಪೂಜೆ ಉತ್ಸವ

Published 10 ಮೇ 2024, 16:14 IST
Last Updated 10 ಮೇ 2024, 16:14 IST
ಅಕ್ಷರ ಗಾತ್ರ

ಶ್ರೀರಾಂಪುರ: ಇಲ್ಲಿನ ದೇವಿಕೆರೆ ಬೀರಲಿಂಗೇಶ್ವರ ಸ್ವಾಮಿ ದೇವಾಲಯದಲ್ಲಿ ಏಕನಾಥೇಶ್ವರಿ-ಯಲ್ಲಮ್ಮ ದೇವಿಯ ಹೊಳೆಪೂಜೆ ಉತ್ಸವ ಶುಕ್ರವಾರ ಅದ್ದೂರಿಯಾಗಿ ನೆರವೇರಿತು.

ಕಾರ್ಯಕ್ರಮದ ಅಂಗವಾಗಿ ಶುಕ್ರವಾರ ಮುಂಜಾನೆ ಗಿರಿಮಲ್ಲನಪಾಳ್ಯ ಗ್ರಾಮದ ಬಳಿಯ ಅಯ್ಯನಕೆರೆ ಮಜ್ಜನಬಾವಿಯಲ್ಲಿ ಗಂಗಾಪೂಜೆ, ಗಣಪತಿಪೂಜೆ, ಪುಣ್ಯಾಹ, ಸ್ಥಿರಬಿಂಬ ಪೂಜೆ, ಪ್ರಾಣ ಪ್ರತಿಷ್ಠಾಪನೆ, ಬಲಿಪ್ರಧಾನ ಕಾರ್ಯಗಳು ನಡೆದವು.

ನಂತರ ಹೊಳೆ ಪೂಜಾ ಕಾರ್ಯಕ್ರಮ ನಡೆಯಿತು. ನಂತರ ದೇವಿಯ ಕಳಶ ಸಮೇತ ದೇವಿಕೆರೆ ಬೀರಲಿಂಗೇಶ್ವರಸ್ವಾಮಿ ಹಾಗೂ ಯಲ್ಲಮ್ಮ ದೇವಿಯ ನಡೆಮುಡಿ ಉತ್ಸವದೊಂದಿಗೆ ದೇವಾಲಯ ಪ್ರವೇಶ ಮಾಡಿ ದೇವಿಯ ಪೀಠಾರೋಹಣ ಮಾಡಲಾಯಿತು.

ಬಳಿಕ ಮಹಾಮಂಗಳಾರತಿ, ಪ್ರಸಾದ ವಿನಿಯೋಗ, ಅನ್ನಸಂತರ್ಪಣೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT