‘ಕನಕ ವೃತ್ತ ಇರಲಿಲ್ಲ, ಸ್ವಾಮೀಜಿ ಸುಮ್ಮನೆ ವಾದ ಮಾಡುತ್ತಿದ್ದಾರೆ ಎಂಬ ಸಚಿವರ ಮಾತಿಗೆ ಸಭೆಯಲ್ಲೇ ಆಕ್ಷೇಪ ವ್ಯಕ್ತವಾಯಿತು. ಸರ್ಕಾರದ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರು ಮಾಹಿತಿ ಆಧರಿಸಿ ಮಾತನಾಡುವುದು ಸೂಕ್ತ ಎಂದು ಸಲಹೆ ನೀಡಿದೆವು. ಇದಕ್ಕೆ ಅಸಮಾಧಾನಗೊಂಡ ಸಚಿವರು, ಏರುಧ್ವನಿಯಲ್ಲಿ ‘ನಾನು ಸುಳ್ಳು ಹೇಳುತ್ತೇನೊ, ನಿಜ ಹೇಳುತ್ತೇನೊ ಕೇಳಿಕೊಂಡು ಹೋಗಿ ಎಂದರು. ಇದಕ್ಕೆ ನಾನು ಸೇರಿದಂತೆ ಮಠದ ಭಕ್ತರು ವಿರೋಧ ವ್ಯಕ್ತಪಡಿಸಿದ್ದೇವೆ’ ಎಂದು ಸಭೆಯ ಮಾಹಿತಿ ಬಿಚ್ಚಿಟ್ಟರು.