ಇಂತಹ ವಿಶೇಷ ಸಂಪ್ರದಾಯದ ಕಾಳುಹಬ್ಬದಲ್ಲಿ ಸೋಮವಾರ ಗಂಗಾಪೂಜೆ ನೇರವೇರಿತು. ಫೆ. 28ರಂದು ಕಾಳಿನಪೂಜೆ, ಅಕ್ಕಿ ಅಳೆಯುವುದು, ಜಾಡಿ ಹಾಸುವುದು, ಮಾರ್ಚ್ 1ರಂದು ಉಂಡೇಮಂಡೆ (ಜವಳ), ಅನ್ನ ಸಂತರ್ಪಣೆ, 2ರಂದು ಕೊಂಡಕ್ಕೆ ಹೋಗುವುದು, ಮಾರ್ಚ್ 3ರಂದು ಮರುದೀಪ ಪೂಜೆ ನಡೆಯಲಿದೆ. ಈ ದೇವರಿಗೆ ತುಪ್ಪದ ದೀಪವನ್ನೇ ಹಚ್ಚಲಾಗುತ್ತದೆ. ದೇವರಿಗೆ ಅಭಿಷೇಕ ಮಾಡಲು, ಕುಡಿಯಲು, ಸ್ನಾನಮಾಡಲು ದೇವರ ಪೂಜಾರಿ ಚಿಲುಮೆ (ಒರತೆ) ನೀರನ್ನೇ ಬಳಸುವ ಸಂಪ್ರದಾಯ ಇದೆ. ಕಂಬಳಿ ಹೊದಿಕೆಯ ದೇವರಿಗೆ ವರ್ಷಕ್ಕೊಮ್ಮೆ ಕಾಳುಹಬ್ಬ ಮಾಡಲಾಗುತ್ತದೆ. ಪೂಜೆ ನಂತರ ಪೂಜಾರಿ ಕಂಬಿಯನ್ನು ಹೆಗಲ ಮೇಲೆ ಇಟ್ಟು ನಡೆಯುವುದು ವಾಡಿಕೆ. ಪೂಜೆ ಮುಗಿದ ಮೇಲೆ ದೇವರು ಯಾವ ದಿಕ್ಕಿನ ಕಡೆ ಮುಖ ಮಾಡಿ ಹೋಗುತ್ತದೋ ಅತ್ತ ಕಡೆ ಉತ್ತಮ ಮಳೆ–ಬೆಳೆ ಆಗುತ್ತದೆ ಎಂಬ ನಂಬಿಕೆ ಜನರಲ್ಲಿ ಇದೆ.