‘ಶ್ರೀಧರ್ ಎಂಬುವರಿಗೆ ಸೇರಿದ ಆಸ್ತಿಯನ್ನು ಅವರು ಮೃತಪಟ್ಟ ಬಳಿಕ ಕಬಳಿಕೆ ಮಾಡಲಾಗಿದೆ. ಆಸ್ತಿ ಮಾಲೀಕರ ಸಹೋದರಿ ನೀಡಿದ ದೂರನ್ನು ಸ್ವೀಕರಿಸಲು ಪೊಲೀಸರು ನಿರಾಕರಿಸಿದ್ದರು. ಪೊಲೀಸರ ಈ ಕ್ರಮದ ಹಿಂದೆ ಶಾಸಕ ಚಂದ್ರಪ್ಪ ಅವರ ಒತ್ತಡವಿತ್ತು ಎಂಬುದು ಬಹಿರಂಗವಾಗಿದೆ. ನ್ಯಾಯಾಲಯದ ಮೆಟ್ಟಿಲೇರಿದ ದೂರುದಾರರು ಎಫ್ಐಆರ್ ದಾಖಲಿಸುವಂತೆ ಆದೇಶ ತರುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಶಾಸಕರು ತಮ್ಮ ಪ್ರಭಾವ ಬಳಸಿ ತನಿಖೆಯ ಹಾದಿ ತಪ್ಪಿಸುವ ಷಡ್ಯಂತ್ರ ರೂಪಿಸಿದ್ದಾರೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.