ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪ್ರತಿಯೊಬ್ಬರ ಬಗ್ಗೆ ಅನುಮಾನ ಹೊಂದಿರುವ ಸಿದ್ದರಾಮಯ್ಯ ಕಾಂಗ್ರೆಸ್ನಲ್ಲಿ ಉಳಿಯುತ್ತಾರಾ ಎಂಬ ಅನುಮಾನ ನಮಗೂ ಇದೆ. ಪಕ್ಷದ ಹೊರತಾಗಿ ವ್ಯವಹಾರ, ಸಂಬಂಧ ಹೊಂದಿದವರು ಹಲವರು ಇದ್ದಾರೆ. ಪರಸ್ಪರ ಭೇಟಿಯಾದ ತಕ್ಷಣ ಪಕ್ಷ ತೊರೆಯುತ್ತಾರೆ ಎಂಬುದು ತಪ್ಪುಕಲ್ಪನೆ’ ಎಂದು ಹೇಳಿದರು.