‘ಕುಂಚಿಟಿಗ ಜಾತಿಯನ್ನು ಒಡೆಯುವ ಹುನ್ನಾರ ನಡೆಯುತ್ತಿದೆ. ನಾವು ಇದನ್ನು ಸಹಿಸುವುದಿಲ್ಲ. ಸಮಾಜದ ಸಂಘಟನೆಗಾಗಿಯೇ ಸಂಗಮೇಶ್ವರ ಜಯಂತಿ, ಕುಂಚಿಟಿಗ ಸಮಾವೇಶ ಮಾಡುತ್ತಿದ್ದೇವೆ. ಕುಂಚಿಟಿಗರು ರೈತರು, ಶ್ರಮಿಕರು, ಸ್ವಾಭಿಮಾನಿಗಳು. ತಾವಾಯಿತು, ತಮ್ಮ ಕಾಯಕವಾಯಿತು ಎಂದು ಬದುಕುತ್ತಿದ್ದಾರೆ. ದೊಡ್ಡ, ದೊಡ್ಡ ಜಾತಿಯ ರಾಜಕಾರಣಿಗಳು, ಮಠಾಧೀಶರು ನಮ್ಮ ನೋವನ್ನು ಅರ್ಥಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.