ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂಚಿಟಿಗರ ಅಭಿವೃದ್ಧಿ ನಿಗಮ ಘೋಷಿಸಲಿ: ಕುಂಚಿಟಿಗ ಮಠದ ಶಾಂತವೀರ ಸ್ವಾಮೀಜಿ ಒತ್ತಾಯ

Last Updated 6 ಅಕ್ಟೋಬರ್ 2020, 3:15 IST
ಅಕ್ಷರ ಗಾತ್ರ

ಹೊಸದುರ್ಗ: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಕುಂಚಿಟಿಗರ ಸಮಸ್ಯೆ ಅರಿತು ತಕ್ಷಣವೇ ಕುಂಚಿಟಿಗರ ಅಭಿವೃದ್ಧಿ ನಿಗಮ ಘೋಷಿಸಬೇಕು. ಕುಂಚಿಟಿಗರನ್ನು ಪ್ರವರ್ಗ–1ಕ್ಕೆ ಸೇರಿಸಬೇಕು. ಕೇಂದ್ರ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಲು ಶಿಫಾರಸು ಮಾಡಬೇಕು ಎಂದು ಕುಂಚಿಟಿಗ ಮಹಾಸಂಸ್ಥಾನ ಮಠದ ಶಾಂತವೀರ ಸ್ವಾಮೀಜಿ ಒತ್ತಾಯಿಸಿದರು.

ಮೈಸೂರಿನಲ್ಲಿರುವ ಡಿ.ಬನುಮಯ್ಯ ಅವರ ಸಮಾಧಿಗೆ ಈಚೆಗೆ ಭೇಟಿ ನೀಡಿದ ಸ್ವಾಮೀಜಿ, ಕುಂಚಿಟಿಗ ಸಮಾಜ ಹಾಗೂ ಡಿ.ಬನುಮಯ್ಯ ಅವರ ಸಮಾಧಿ ಮೇಲೆ ಅತಿಕ್ರಮಣ, ಅಪಪ್ರಚಾರ ಮಾಡಲು ಪ್ರಯತ್ನಿಸುತ್ತಿರುವುದು ಖಂಡನೀಯ ಎಂದು ಹೇಳಿದರು.

‘ಕುಂಚಿಟಿಗ ಜಾತಿಯನ್ನು ಒಡೆಯುವ ಹುನ್ನಾರ ನಡೆಯುತ್ತಿದೆ. ನಾವು ಇದನ್ನು ಸಹಿಸುವುದಿಲ್ಲ. ಸಮಾಜದ ಸಂಘಟನೆಗಾಗಿಯೇ ಸಂಗಮೇಶ್ವರ ಜಯಂತಿ, ಕುಂಚಿಟಿಗ ಸಮಾವೇಶ ಮಾಡುತ್ತಿದ್ದೇವೆ. ಕುಂಚಿಟಿಗರು ರೈತರು, ಶ್ರಮಿಕರು, ಸ್ವಾಭಿಮಾನಿಗಳು. ತಾವಾಯಿತು, ತಮ್ಮ ಕಾಯಕವಾಯಿತು ಎಂದು ಬದುಕುತ್ತಿದ್ದಾರೆ. ದೊಡ್ಡ, ದೊಡ್ಡ ಜಾತಿಯ ರಾಜಕಾರಣಿಗಳು, ಮಠಾಧೀಶರು ನಮ್ಮ ನೋವನ್ನು ಅರ್ಥಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.

ಮೈಸೂರು ಕುಂಚಿಟಿಗ ಸಂಘದ ಅಧ್ಯಕ್ಷ ನಾಗರಾಜ, ಕುಂಚಿಟಿಗ ಸಂಘದ ಪದಾಧಿಕಾರಿಗಳು, ಡಿ.ಬನುಮಯ್ಯ ಅವರ ವಂಶಸ್ಥರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT