ಮುಖ್ಯಮಂತ್ರಿ ಹೊಸಹಳ್ಳಿ ಬ್ಯಾರೇಜ್ನಿಂದ ಧರ್ಮಪುರ ಕೆರೆಗೆ ನೀರು ಹರಿಸುವ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲು ಹೊಸಹಳ್ಳಿ ಬ್ಯಾರೇಜ್ಗೆ ಭೇಟಿ ನೀಡುತ್ತಿರುವುದರಿಂದ ಹೊಸಹಳ್ಳಿ, ಗೂಳ್ಯ, ಸೂಗೂರು,
ಮುಂಗುಸುವಳ್ಳಿ, ಧರ್ಮಪುರ, ಹರಿಯಬ್ಬೆ, ತೋಪಿನಗೊಲ್ಲಾಹಳ್ಳಿ ಗೇಟ್ ಮತ್ತಿತರ ಕಡೆ ಕಾರ್ಯಕ್ರಮ ನಡೆಸಲು ಸ್ಥಳ ಗುರುತಿಸಲಾಗಿದೆ. ಒಂದು ಪ್ರದೇಶವನ್ನು ಆಯ್ಕೆ ಮಾಡಿಕೊಳ್ಳಲಾಗುವುದು.ಜತೆಗೆ ಅಂದು ಮಿನಿ ವಿಧಾನಸೌಧದ ಭೂಮಿಪೂಜೆ ಸೇರಿ ಒಟ್ಟು 29 ವಿವಿಧ ಕಾಮಗಾರಿಗಳ ಭೂಮಿಪೂಜೆ ಮತ್ತು ಉದ್ಘಾಟನೆ ಕಾರ್ಯಕ್ರಮಗಳು ನೆರವೇರಲಿವೆ ಎಂದು ಮಾಹಿತಿ ನೀಡಿದರು.