‘ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ವಾಣಿವಿಲಾಸಕ್ಕೆ ಕೇವಲ 2 ಟಿಎಂಸಿ ಅಡಿ ನೀರು ನಿಗದಿಪಡಿಸಿದ್ದು, ಅಚ್ಚುಕಟ್ಟು ಹಾಗೂ ಹಿರಿಯೂರು, ಚಳ್ಳಕೆರೆ, ಕುದಾಪುರ, ಚಿತ್ರದುರ್ಗ, ಹೊಳಲ್ಕೆರೆ ನಗರಗಳಿಗೆ ಮತ್ತು ಅಲ್ಲಿನ ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆಗೆ ವರ್ಷಕ್ಕೆ ಕನಿಷ್ಠ 8 ಟಿಎಂಸಿ ಅಡಿಯಿಂದ 8.50 ಟಿಎಂಸಿ ಅಡಿ ನೀರಿನ ಅಗತ್ಯವಿದೆ. 10 ಟಿಎಂಸಿ ಅಡಿ ನೀರು ಹರಿಸುವ ಆದೇಶ ಮಾಡುವವರೆಗೆ ವಾಣಿವಿಲಾಸದ ನೀರಿಗೆ ಯೋಜನೆಗಳನ್ನು ರೂಪಿಸುವುನ್ನು ಸರ್ಕಾರ ತಕ್ಷಣ ನಿಲ್ಲಿಸಬೇಕು’ ಎಂದು ಒತ್ತಾಯಿಸಿದರು.