ತಾಲ್ಲೂಕಿನ ದಂಡಿನಕುರುಬರಹಟ್ಟಿಯ ಭೀಮಾರೆಡ್ಡಿ ಅವರ ಜಮೀನಿಗೆ ಭೇಟಿ ನೀಡಿ ಈರುಳ್ಳಿ ಕಿತ್ತು ನೋಡಿದರು. 1988ರಿಂದ ಈರುಳ್ಳಿ ಬೆಳೆಯುತ್ತಿರುವ ಭೀಮಾರೆಡ್ಡಿ ಮೂರು ಎಕರೆಗೆ ಅಂದಾಜು ₹ 1 ಲಕ್ಷ ವೆಚ್ಚ ಮಾಡಿದ್ದಾರೆ. ಕೊಳೆ ರೋಗ ಬಂದು ಶೇ 90ರಷ್ಟು ಬೆಳೆ ಹಾನಿಯಾಗಿದೆ. ತೋಪರಮಾಳಿಗೆ, ಕಲ್ಲಹಳ್ಳಿ, ಕಾಸವರಹಟ್ಟಿ ಸೇರಿ ಹಲವು ಗ್ರಾಮದಲ್ಲಿ ಈರುಳ್ಳಿ ಬೆಳೆ ಸಂಪೂರ್ಣ ಹಾಳಾಗಿದೆ.