ಹಿರಿಯೂರು: ತಾಲ್ಲೂಕಿನ ರಂಗೇನಹಳ್ಳಿಯ 66/11 ಕೆವಿ ವಿದ್ಯುತ್ ಉಪ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕಾಮಗಾರಿ ಪ್ರಯುಕ್ತ ಜೂನ್ 13ರಂದು ಬೆಳಿಗ್ಗೆ 10 ರಿಂದ ಸಂಜೆ 4ರವರೆಗೆ ಕೆಳಕಂಡ ಸ್ಥಳಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ಬೆಸ್ಕಾಂ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪೀರ್ ಸಾಬ್ ತಿಳಿಸಿದ್ದಾರೆ.
ಟಿ. ಓಬೇನಹಳ್ಳಿ, ಅಂಬಲಗೆರೆ, ಶಿವಗಂಗ, ರಂಗೇನಹಳ್ಳಿ, ಬ್ಯಾಡರಹಳ್ಳಿ ಸುತ್ತಮುತ್ತ ಪ್ರದೇಶದ ಗ್ರಾಹಕರು, ರೈತರು, ಸಾರ್ವಜನಿಕರು ಸಹಕರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.