ವಿವಿ ಸಾಗರದಿಂದ ವೇದಾವತಿ ನದಿಗೆ ಹರಿದು ಬಂದ ನೀರನ್ನು ಶಿಡ್ಲಯ್ಯನಕೋಟೆ ಬಲನಾಲೆ ಮೂಲಕ ರಾಣಿಕೆರೆಗೆ ತರುವ ಸಲುವಾಗಿ ಮಾಜಿ ಸಚಿವ ದಿವಂಗತ ಬಿ.ಎಲ್.ಗೌಡರು, 1975-76ರಲ್ಲಿ ನಿರ್ಮಾಣ ಮಾಡಿದ್ದ 3 ಕಿ.ಮೀ. ಉದ್ದದ ಕಿರಿದಾದ ರಾಣಿಕೆರೆ ಫೀಡರ್ ಕಾಲುವೆಯಲ್ಲಿ ಜಾಲಿ ಗಿಡಗಳು ಬೆಳೆದಿವೆ. ಅಲ್ಲದೆ ಕಲ್ಲಿನ ಕಟ್ಟಡ ಅಲ್ಲಲ್ಲಿ ಕಿತ್ತು ಹೋಗಿ ಕಾಲುವೆ ಮುಚ್ಚಿಹೋಗಿದೆ. ಹೀಗಾಗಿ ಫೀಡರ್ ಕಾಲುವೆ ಮತ್ತು ರಾಣಿಕೆರೆ ವ್ಯಾಪ್ತಿಯ ವಿಡಪನಕುಂಟೆ, ಕರಿಕೆರೆ, ಕಾಲುವೆಹಳ್ಳಿ, ವಿಶ್ವೇಶಪುರ, ಮೀರಾಸಾಬಿಹಳ್ಳಿ, ಭರಮಸಾಗರ, ಕಸ್ತೂರಿ ತಿಮ್ಮನಹಳ್ಳಿ, ದ್ಯಾವರನಹಳ್ಳಿ, ಪುರ್ಲೆಹಳ್ಳಿ, ಚಿಕ್ಕೇನಹಳ್ಳಿ ಸೇರಿ 20ಕ್ಕೂ ಹೆಚ್ಚು ಗ್ರಾಮಗಳು ವಿವಿ ಸಾಗರದ ನೀರಿನಿಂದ ವಂಚಿತವಾಗಿದ್ದು ಕೊಳವೆ ಬಾವಿ ಬತ್ತುವ ಸ್ಥಿತಿಯಲ್ಲಿವೆ ಎಂದು ಮೀರಾಸಾಬಿಹಳ್ಳಿ ಗ್ರಾಮದ ನೀರಾವರಿ ಅಚ್ಚುಕಟ್ಟುದಾರ ನಾಗರಾಜ ಆತಂಕ ವ್ಯಕ್ತಪಡಿಸಿದರು.