ದೇವಸ್ಥಾನದ ಪಾದಗಟ್ಟೆಯವರೆಗೂ ತೇರನ್ನು ಎಳೆದ ಭಕ್ತರು ರಥಕ್ಕೆ ಬಾಳೆಹಣ್ಣುಗಳನ್ನು ಎಸೆದು ರಥದ ಗಾಲಿಗೆ ತೆಂಗಿನ ಕಾಯಿಯನ್ನು ಒಡೆಯುವ ಮೂಲಕ ಭಕ್ತಿ ಸಮರ್ಪಿಸಿದರು. ರಥೋತ್ಸವಕ್ಕೆ ಸುತ್ತ– ಮುತ್ತಲ ಗ್ರಾಮಗಳಾದ ಹಾಲಿಗೊಂಡನಹಳ್ಳಿ, ನಾಗಗೊಂಡನಹಳ್ಳಿ, ಹರವಿ ಗೊಂಡನಹಳ್ಳಿ, ಜಾಜೂರು, ಕಾಮಸಮುದ್ರ, ತಪ್ಪಗೊಂಡನಹಳ್ಳಿ ಸೇರಿದಂತೆ ಇನ್ನೂ ಅನೇಕ ಗ್ರಾಮಗಳ ಜನರು ಹಾಜರಿದ್ದರು.