<p><strong>ಪರಶುರಾಂಪುರ:</strong>ಗ್ರಾಮದ ಕೆಲವು ಕಾಲೊನಿಗಳಲ್ಲಿ ಕೆಂಪು ನೀರು ಪೂರೈಕೆಯಾಗುತ್ತಿದ್ದು, ನೀರಿನಲ್ಲಿ ಹುಳು, ಕಸ, ಕಡ್ಡಿ ಬರುತ್ತಿದೆ.</p>.<p>ಈ ನೀರು ಕುಡಿದರೆ ಕಾಯಿಲೆ ಬರುವುದು ಖಚಿತ ಎಂದು ನೀರು ಪೂರೈಕೆ ಮಾಡುತ್ತಿರುವ ಗ್ರಾಮ ಪಂಚಾಯಿತಿ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.</p>.<p>ಗ್ರಾಮಕ್ಕೆ ವೇದಾವತಿ ನದಿಯಿಂದ ನೀರು ಪೂರೈಸಲಾಗುತ್ತಿದೆ. ನದಿಯಲ್ಲಿ ಕೊರೆದಿರುವ ಕೊಳವೆಬಾವಿಯ ಪೈಪ್ ಅನ್ನು ಸರಿಯಾಗಿ ಮುಚ್ಚಿಲ್ಲ. ಇದರಿಂದ ನೀರು ಶುದ್ಧೀಕರಣವಾಗದೇ ನದಿಯ ನೀರು ನೇರವಾಗಿ ಪೈಪ್ ಮೂಲಕ ಬರುತ್ತಿದೆ ಎಂದುಗ್ರಾಮದ ಮಂಗಳಗೌರಿ, ಮಾರಕ್ಕ ಹೇಳಿದರು.</p>.<p>‘ಪ್ರತಿ ತಿಂಗಳು ನೀರಿಗೆ ₹ 50 ತೆರಿಗೆಯನ್ನು ಗ್ರಾಮ ಪಂಚಾಯಿತಿಗೆ ಕಟ್ಟುತ್ತೇವೆ. ಕೇವಲ ಹಣ ಪಡೆದರೆ ಸಾಲದು. ಜನರ ಸಮಸ್ಯೆಗಳ ಬಗ್ಗೆ ಸಳ್ಥೀಯ ಆಡಳಿತ ಗಮನ ಹರಿಸಬೇಕು. ಗ್ರಾಮದಲ್ಲಿ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ. ನೀರನ್ನು ಶುದ್ಧೀಕರಿಸಿ ಪೂರೈಸಬೇಕು ಎಂದು ಪ್ರಸನ್ನ, ಶಿವರಾಜ ಒತ್ತಾಯಿಸಿದರು.</p>.<p class="Subhead">ಖಾನಿಹಳ್ಳಕ್ಕೆ ಗ್ರಾಮ ಪಂಚಾಯಿತಿ ತ್ಯಾಜ್ಯ: ಗ್ರಾಮ ಪಂಚಾಯಿತಿಯಿಂದ ಸಂಗ್ರಹಿಸುವ ಘನ ತ್ಯಾಜ್ಯವನ್ನು ಖಾನಿ ಹಳ್ಳಕ್ಕೆ ಸುರಿಯುತ್ತಿದ್ದು, ಈ ಹಳ್ಳದಲ್ಲಿ ಹರಿಯುವ ನೀರು ವೇದಾವತಿ ನದಿಯನ್ನು ಸೇರುತ್ತಿದೆ. ಹಾಗಾಗಿ ಈ ತ್ಯಾಜ್ಯ ನೀರಿನಲ್ಲಿ ಸೇರುತ್ತಿದೆ. ಕೂಡಲೇ ಖಾನಿ ಹಳ್ಳಕ್ಕೆ ಹಾಕುವ ತ್ಯಾಜ್ಯವನ್ನು ನಿಲ್ಲಿಸಬೇಕು ಎಂದು ಅವರು ಆಗ್ರಹಿಸಿದರು.</p>.<p class="Subhead">ಈಗಾಗಲೇ ನೀರಿನ ಮೂಲಗಳಾದ ತೊಟ್ಟಿ, ಟ್ಯಾಂಕ್ಗಳನ್ನು ಸ್ವಚ್ಛಗೊಳಿಸಲಾಗಿದೆ. ನದಿಯಲ್ಲಿ ನೀರು ಹರಿಯುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಪೈಪ್ಲೈನ್ ಬದಲಾಯಿಸಲಾಗುವುದು.</p>.<p class="Subhead">ಗುಂಡಪ್ಪ, ಪಿಡಿಒ</p>.<p class="Subhead">ಕೂಡಲೇ ಸ್ಥಳೀಯ ಆಡಳಿತ ಎಚ್ಚೆತ್ತುಕೊಂಡು ಜನರಿಗೆ ಉತ್ತಮವಾದ ನೀರು ಪೂರೈಸಲು ಕ್ರಮ ಕೈಗೊಳ್ಳಬೇಕು.</p>.<p class="Subhead">ಪ್ರಸನ್ನಕುಮಾರ, ಗ್ರಾ.ಪಂ. ಮಾಜಿ ಸದಸ್ಯ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪರಶುರಾಂಪುರ:</strong>ಗ್ರಾಮದ ಕೆಲವು ಕಾಲೊನಿಗಳಲ್ಲಿ ಕೆಂಪು ನೀರು ಪೂರೈಕೆಯಾಗುತ್ತಿದ್ದು, ನೀರಿನಲ್ಲಿ ಹುಳು, ಕಸ, ಕಡ್ಡಿ ಬರುತ್ತಿದೆ.</p>.<p>ಈ ನೀರು ಕುಡಿದರೆ ಕಾಯಿಲೆ ಬರುವುದು ಖಚಿತ ಎಂದು ನೀರು ಪೂರೈಕೆ ಮಾಡುತ್ತಿರುವ ಗ್ರಾಮ ಪಂಚಾಯಿತಿ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.</p>.<p>ಗ್ರಾಮಕ್ಕೆ ವೇದಾವತಿ ನದಿಯಿಂದ ನೀರು ಪೂರೈಸಲಾಗುತ್ತಿದೆ. ನದಿಯಲ್ಲಿ ಕೊರೆದಿರುವ ಕೊಳವೆಬಾವಿಯ ಪೈಪ್ ಅನ್ನು ಸರಿಯಾಗಿ ಮುಚ್ಚಿಲ್ಲ. ಇದರಿಂದ ನೀರು ಶುದ್ಧೀಕರಣವಾಗದೇ ನದಿಯ ನೀರು ನೇರವಾಗಿ ಪೈಪ್ ಮೂಲಕ ಬರುತ್ತಿದೆ ಎಂದುಗ್ರಾಮದ ಮಂಗಳಗೌರಿ, ಮಾರಕ್ಕ ಹೇಳಿದರು.</p>.<p>‘ಪ್ರತಿ ತಿಂಗಳು ನೀರಿಗೆ ₹ 50 ತೆರಿಗೆಯನ್ನು ಗ್ರಾಮ ಪಂಚಾಯಿತಿಗೆ ಕಟ್ಟುತ್ತೇವೆ. ಕೇವಲ ಹಣ ಪಡೆದರೆ ಸಾಲದು. ಜನರ ಸಮಸ್ಯೆಗಳ ಬಗ್ಗೆ ಸಳ್ಥೀಯ ಆಡಳಿತ ಗಮನ ಹರಿಸಬೇಕು. ಗ್ರಾಮದಲ್ಲಿ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ. ನೀರನ್ನು ಶುದ್ಧೀಕರಿಸಿ ಪೂರೈಸಬೇಕು ಎಂದು ಪ್ರಸನ್ನ, ಶಿವರಾಜ ಒತ್ತಾಯಿಸಿದರು.</p>.<p class="Subhead">ಖಾನಿಹಳ್ಳಕ್ಕೆ ಗ್ರಾಮ ಪಂಚಾಯಿತಿ ತ್ಯಾಜ್ಯ: ಗ್ರಾಮ ಪಂಚಾಯಿತಿಯಿಂದ ಸಂಗ್ರಹಿಸುವ ಘನ ತ್ಯಾಜ್ಯವನ್ನು ಖಾನಿ ಹಳ್ಳಕ್ಕೆ ಸುರಿಯುತ್ತಿದ್ದು, ಈ ಹಳ್ಳದಲ್ಲಿ ಹರಿಯುವ ನೀರು ವೇದಾವತಿ ನದಿಯನ್ನು ಸೇರುತ್ತಿದೆ. ಹಾಗಾಗಿ ಈ ತ್ಯಾಜ್ಯ ನೀರಿನಲ್ಲಿ ಸೇರುತ್ತಿದೆ. ಕೂಡಲೇ ಖಾನಿ ಹಳ್ಳಕ್ಕೆ ಹಾಕುವ ತ್ಯಾಜ್ಯವನ್ನು ನಿಲ್ಲಿಸಬೇಕು ಎಂದು ಅವರು ಆಗ್ರಹಿಸಿದರು.</p>.<p class="Subhead">ಈಗಾಗಲೇ ನೀರಿನ ಮೂಲಗಳಾದ ತೊಟ್ಟಿ, ಟ್ಯಾಂಕ್ಗಳನ್ನು ಸ್ವಚ್ಛಗೊಳಿಸಲಾಗಿದೆ. ನದಿಯಲ್ಲಿ ನೀರು ಹರಿಯುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಪೈಪ್ಲೈನ್ ಬದಲಾಯಿಸಲಾಗುವುದು.</p>.<p class="Subhead">ಗುಂಡಪ್ಪ, ಪಿಡಿಒ</p>.<p class="Subhead">ಕೂಡಲೇ ಸ್ಥಳೀಯ ಆಡಳಿತ ಎಚ್ಚೆತ್ತುಕೊಂಡು ಜನರಿಗೆ ಉತ್ತಮವಾದ ನೀರು ಪೂರೈಸಲು ಕ್ರಮ ಕೈಗೊಳ್ಳಬೇಕು.</p>.<p class="Subhead">ಪ್ರಸನ್ನಕುಮಾರ, ಗ್ರಾ.ಪಂ. ಮಾಜಿ ಸದಸ್ಯ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>