<p><strong>ಮೊಳಕಾಲ್ಮುರು</strong>: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರುದ್ರಮ್ಮನಹಳ್ಳಿಯಲ್ಲಿ ಪ್ರಸಿದ್ಧ ನಲ್ಲಜರುವ ಓಬಳಸ್ವಾಮಿ ಜಾತ್ರೆಯು 4 ದಿನಗಳ ಕಾಲ ವೈಭವದಿಂದ ನಡೆದು ಸೋಮವಾರ ಮುಕ್ತಾಯವಾಯಿತು.</p>.<p>ಪ್ರತಿವರ್ಷ ಶೂನ್ಯ ಮಾಸದಲ್ಲಿ ಈ ಜಾತ್ರೆಯನ್ನು ನಡೆಸಿಕೊಂಡು ಬರಲಾಗುತ್ತಿದೆ. ಮ್ಯಾಸನಾಯಕ ಜನಾಂಗದ ಕೆಲ ಕಟ್ಟೆಮನೆಗಳಿಗೆ ಈ ದೇವರು ಮನೆ ದೇವರಾಗಿದ್ದು, ರಾಜ್ಯದ ವಿವಿಧ ಭಾಗಗಳಲ್ಲಿ ನೆಲೆಸಿರುವ ಕಟ್ಟೆಮನೆಯವರು ಇಲ್ಲಿಗೆ ಬಂದು ವಾರ್ಷಿಕವಾಗಿ ಪೂಜೆ ಸಲ್ಲಿಸುವುದು ನಡೆದುಕೊಂಡು ಬಂದಿದೆ.</p>.<p>ಜಾತ್ರೆ ಅಂಗವಾಗಿ ಶುಕ್ರವಾರ ಸಂಜೆ ದೇವರ ಎತ್ತುಗಳನ್ನು ದೇವಸ್ಥಾನ ಮುಂಭಾಗದಲ್ಲಿ ಪೂಜೆ ಸಲ್ಲಿಸುವ ಮೂಲಕ ಸ್ವಾಗತ ಮಾಡಿಕೊಳ್ಳಲಾಯಿತು. ಶನಿವಾರ ಬುಡಕಟ್ಟು ವಾದ್ಯಗಳು ಹಾಗೂ ಸಂಪ್ರದಾಯಗಳ ಸಮ್ಮುಖದಲ್ಲಿ ಸ್ವಾಮಿಯ ಉತ್ಸವ ಮೂರ್ತಿಯನ್ನು ಗಂಗಾಪೂಜೆಗೆ ಕರೆದುಕೊಂಡು ಹೋಗಲಾಯಿತು. ಮರಳಿ ಬಂದು ಸಂಜೆ ದೇವರುಗಳನ್ನು ಗುಡಿದುಂಬಿಸಲಾಯಿತು.</p>.<p>ಭಾನುವಾರ ಬೆಳಿಗ್ಗೆ ಮೀಸಲು ಹುರಳಿಯಿಂದ ತಯಾರಿಸಿದ್ದ ಗುಗ್ಗರಿ ನೈವೇದ್ಯ ಅರ್ಪಣೆ, 101 ಪೂಜೆ, ಸೂರ್ಯಪಾಡ್ಯ ತೀರಿಸುವ ಕಾರ್ಯಕ್ರಮ, ದೇವಸ್ಥಾನ ಮುಂಭಾಗದಲ್ಲಿ ದೇವರ ಎತ್ತುಗಳನ್ನು ಓಡಿಸುವುದು, ನಂತರ ದಾಸೋಹ ಮತ್ತು ಮಣೇವು ಅರ್ಪಣೆ ಕಾರ್ಯಕ್ರಮ ನಡೆದವು.</p>.<p>ಸೋಮವಾರ ಬೆಳಿಗ್ಗೆ ಮಹಾ ಮಂಗಳಾರತಿ, ಅಣ್ಣ ತಮ್ಮಂದಿರರಿಗೆ ಹಣ್ಣು– ಹೂವು ವಿತರಣೆ, ಪ್ರಸಾದ ವಿನಿಯೋಗ ನಂತರ ದೇವರ ಎತ್ತುಗಳನ್ನು ಬೀಳ್ಕೊಡುವ ಮೂಲಕ ಜಾತ್ರೆಗೆ ತೆರೆಬಿದ್ದಿತು ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೊಳಕಾಲ್ಮುರು</strong>: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರುದ್ರಮ್ಮನಹಳ್ಳಿಯಲ್ಲಿ ಪ್ರಸಿದ್ಧ ನಲ್ಲಜರುವ ಓಬಳಸ್ವಾಮಿ ಜಾತ್ರೆಯು 4 ದಿನಗಳ ಕಾಲ ವೈಭವದಿಂದ ನಡೆದು ಸೋಮವಾರ ಮುಕ್ತಾಯವಾಯಿತು.</p>.<p>ಪ್ರತಿವರ್ಷ ಶೂನ್ಯ ಮಾಸದಲ್ಲಿ ಈ ಜಾತ್ರೆಯನ್ನು ನಡೆಸಿಕೊಂಡು ಬರಲಾಗುತ್ತಿದೆ. ಮ್ಯಾಸನಾಯಕ ಜನಾಂಗದ ಕೆಲ ಕಟ್ಟೆಮನೆಗಳಿಗೆ ಈ ದೇವರು ಮನೆ ದೇವರಾಗಿದ್ದು, ರಾಜ್ಯದ ವಿವಿಧ ಭಾಗಗಳಲ್ಲಿ ನೆಲೆಸಿರುವ ಕಟ್ಟೆಮನೆಯವರು ಇಲ್ಲಿಗೆ ಬಂದು ವಾರ್ಷಿಕವಾಗಿ ಪೂಜೆ ಸಲ್ಲಿಸುವುದು ನಡೆದುಕೊಂಡು ಬಂದಿದೆ.</p>.<p>ಜಾತ್ರೆ ಅಂಗವಾಗಿ ಶುಕ್ರವಾರ ಸಂಜೆ ದೇವರ ಎತ್ತುಗಳನ್ನು ದೇವಸ್ಥಾನ ಮುಂಭಾಗದಲ್ಲಿ ಪೂಜೆ ಸಲ್ಲಿಸುವ ಮೂಲಕ ಸ್ವಾಗತ ಮಾಡಿಕೊಳ್ಳಲಾಯಿತು. ಶನಿವಾರ ಬುಡಕಟ್ಟು ವಾದ್ಯಗಳು ಹಾಗೂ ಸಂಪ್ರದಾಯಗಳ ಸಮ್ಮುಖದಲ್ಲಿ ಸ್ವಾಮಿಯ ಉತ್ಸವ ಮೂರ್ತಿಯನ್ನು ಗಂಗಾಪೂಜೆಗೆ ಕರೆದುಕೊಂಡು ಹೋಗಲಾಯಿತು. ಮರಳಿ ಬಂದು ಸಂಜೆ ದೇವರುಗಳನ್ನು ಗುಡಿದುಂಬಿಸಲಾಯಿತು.</p>.<p>ಭಾನುವಾರ ಬೆಳಿಗ್ಗೆ ಮೀಸಲು ಹುರಳಿಯಿಂದ ತಯಾರಿಸಿದ್ದ ಗುಗ್ಗರಿ ನೈವೇದ್ಯ ಅರ್ಪಣೆ, 101 ಪೂಜೆ, ಸೂರ್ಯಪಾಡ್ಯ ತೀರಿಸುವ ಕಾರ್ಯಕ್ರಮ, ದೇವಸ್ಥಾನ ಮುಂಭಾಗದಲ್ಲಿ ದೇವರ ಎತ್ತುಗಳನ್ನು ಓಡಿಸುವುದು, ನಂತರ ದಾಸೋಹ ಮತ್ತು ಮಣೇವು ಅರ್ಪಣೆ ಕಾರ್ಯಕ್ರಮ ನಡೆದವು.</p>.<p>ಸೋಮವಾರ ಬೆಳಿಗ್ಗೆ ಮಹಾ ಮಂಗಳಾರತಿ, ಅಣ್ಣ ತಮ್ಮಂದಿರರಿಗೆ ಹಣ್ಣು– ಹೂವು ವಿತರಣೆ, ಪ್ರಸಾದ ವಿನಿಯೋಗ ನಂತರ ದೇವರ ಎತ್ತುಗಳನ್ನು ಬೀಳ್ಕೊಡುವ ಮೂಲಕ ಜಾತ್ರೆಗೆ ತೆರೆಬಿದ್ದಿತು ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>