10 ತಿಂಗಳ ಮಗುವಿಗೆ ಫೆ.26ರಂದು ನಾಮಕರಣ ಸಮಾರಂಭ ಏರ್ಪಡಿಸಲಾಗಿತ್ತು. ಪತಿ ಹೇಮಂತ್ ಹಾಗೂ ತಂದೆ ಮಹಾಂತೇಶನಾಯ್ಕ ಅವರು ಸಮಾರಂಭದ ಸಿದ್ಧತೆಗೆ ಅಗತ್ಯ ಇರುವ ಸಾಮಗ್ರಿ ಖರೀದಿಸಲು ಸೋಮವಾರ ಚಿಕ್ಕಜಾಜೂರಿಗೆ ಹೋಗಿದ್ದರು. ಪಟ್ಟಣದಿಂದ ಸಂಜೆ ಮನೆಗೆ ಮರಳಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಟಬ್ ನೀರಿನಲ್ಲಿ ಮಗು ಮೃತಪಟ್ಟಿದ್ದು, ಆಶಾ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.