<p><strong>ಚಿತ್ರದುರ್ಗ</strong>: ‘ರಾಜ್ಯದ 58ಸಾವಿರ ಬೂತ್ಗಳಲ್ಲಿ ಜ. 26ರಂದು ಸಿಎಎ, ಎನ್ಆರ್ಸಿ ಪರವಾಗಿ ರಾಷ್ಟ್ರಧ್ವಜ ಹಾರಿಸುವ ಮೂಲಕ ಬಿಜೆಪಿ ಬೂತ್ಮಟ್ಟದ ಅಧ್ಯಕ್ಷರು ಮೋದಿ ಅವರಿಗೆ ಪತ್ರ ಸಂದೇಶ ಕಳಿಸಲಿದ್ದಾರೆ’ ಎಂದು ಬಿಜೆಪಿ ಮುಖಂಡ, ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್ ತಿಳಿಸಿದರು.</p>.<p>‘26ಕ್ಕೆ ಸಿಎಎ ಅಭಿಯಾನ ಮುಕ್ತಾಯವಾಗಲಿದೆ. ಅಂದು ಎಲ್ಲ ಬೂತ್ಗಳಲ್ಲೂ ಸಾರ್ವಜನಿಕರಿಂದ ಸಹಿ ಸಂಗ್ರಹಿಸಿ ಇಲ್ಲಿಂದಲೇ ಮೋದಿ ಅವರನ್ನು ಅಭಿನಂದಿಸುವ ಕಾರ್ಯಕ್ರಮ ಆಯೋಜಿಸಿದ್ದೇವೆ. ಹುಟ್ಟು ಬಟ್ಟೆಯಲ್ಲೇ ದೇಶಕ್ಕೆ ಬಂದವರು ಎಂಬ ಪುಸ್ತಕದ ಕುರಿತು 1ಗಂಟೆ ಚರ್ಚೆಯೂ ನಡೆಯಲಿದೆ’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.</p>.<p>‘ನಾಗರಿಕ ಪೌರತ್ವ ಕಾಯ್ದೆ ವಿಶ್ವದ ಶೇ 99ರಷ್ಟು ರಾಷ್ಟ್ರಗಳಲ್ಲಿ ಜಾರಿಯಲ್ಲಿದೆ. ಈ ಹಿಂದೆ ಗಾಂಧಿಜೀ ಅವರು ಪಾಕ್ ಸೇರಿ ಇತರೆ ರಾಷ್ಟ್ರಗಳಲ್ಲಿ ನೀವು ಜೀವಿಸಲು ಸಾಧ್ಯವಾಗದಿದ್ದರೆ, ಭಾರತಕ್ಕೆ ಬನ್ನಿ. ನಿಮ್ಮನ್ನು ದೇಶ ಸ್ವಾಗತಿಸಲಿದೆ ಎಂದು ಭಾರತೀಯರ ಕುರಿತು ಹೇಳಿದ್ದರು. ಇದನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಪೌರತ್ವ ಕಾಯ್ದೆ ತಿದ್ದುಪಡಿ ಮಾಡಿದೆ’ ಎಂದರು.</p>.<p>‘ತಿದ್ದುಪಡಿಯಲ್ಲಿ ಹೇಳಿಕೊಳ್ಳುವಂಥ ಬದಲಾವಣೆ ಆಗಿಲ್ಲ. ಈ ಮುಂಚೆ 11 ವರ್ಷ ಇದ್ದ ಮಿತಿಯನ್ನು 5ವರ್ಷಕ್ಕೆ ಇಳಿಸಲಾಗಿದೆ. ದೇಶದ ಯಾವೊಬ್ಬ ಪ್ರಜೆಗೂ ಇದರಿಂದ ತೊಂದರೆ ಆಗುವುದಿಲ್ಲ. ಪೌರತ್ವ ರದ್ದಾಗುವುದಿಲ್ಲ’ ಎಂದು ಹೇಳಿದರು.</p>.<p>‘ಗಾಂಧಿ, ನೆಹರು, ಇಂದಿರಾಗಾಂಧಿ, ಲಾಲ್ಬಹದ್ದೂರ್ ಶಾಸ್ತ್ರೀ, ರಾಜೀವ್ಗಾಂಧಿ, ಮನಮೋಹನ್ಸಿಂಗ್ ಕೂಡ ಒಪ್ಪಿಕೊಂಡ ಪೌರತ್ವ ತಿದ್ದುಪಡಿಯನ್ನು ಗಾಂಧಿ ಪರಿವಾರ ಎಂಬುದಾಗಿ ಹೇಳಿಕೊಳ್ಳುವಂಥ ಕಾಂಗ್ರೆಸ್, ಎಡಪಂಥೀಯ ಪಕ್ಷಗಳು ವಿರೋಧಿಸುತ್ತಿರುವುದು ವಿಪರ್ಯಾಸ. ದೇಶದ ಶೇ 90ರಷ್ಟು ಮಂದಿ ಇದರ ಪರವಾಗಿಯೇ ಇದ್ದಾರೆ’ ಎಂದು ತಿಳಿಸಿದರು.</p>.<p>‘ಪಾಕಿಸ್ತಾನದ 1996 ಮಂದಿ ಅಲ್ಪಸಂಖ್ಯಾತರು, ಆಫ್ಗಾನಿಸ್ತಾನದ 361 ಮಂದಿ ಸೇರಿ ಮುಸ್ಲಿಂ ರಾಷ್ಟ್ರಗಳಿಂದ ಇಲ್ಲಿಗೆ ಬಂದ ಸುಮಾರು 5ಸಾವಿರಕ್ಕೂ ಹೆಚ್ಚು ಮಂದಿಗೆ ಈ ಹಿಂದೆಯೇ ಪೌರತ್ವ ನೀಡಲಾಗಿದೆ. ಈಗ ಮತಬ್ಯಾಂಕ್ ರಾಜಕಾರಣಕ್ಕಾಗಿ ವಿರೋಧಿಸುತ್ತಿರುವವರು ರಾಷ್ಟ್ರಕ್ಕೆ ಆಘಾತ ಉಂಡು ಮಾಡುವ ದೇಶ ದ್ರೋಹಿಗಳು’ ಎಂದು ಪುನರುಚ್ಚರಿಸಿದರು.</p>.<p>‘ಸೋನಿಯಾಗಾಂಧಿ, ಅದ್ನಾನ್ ಸಾಮಿ, ತಸ್ಲಿಮಾ ನಸ್ರಿನ್ ಸೇರಿ ಅನೇಕರಿಗೆ ಪೌರತ್ವ ನೀಡಲಾಗಿದೆ. ಕಾಯ್ದೆ ತಿದ್ದುಪಡಿ ನಂತರ ಯಾರನ್ನಾದರೂ ದೇಶ ಬಿಟ್ಟು ಓಡಿಸಲಾಗಿದೆಯೇ’ ಎಂದು ಪ್ರಶ್ನಿಸಿದರು.</p>.<p>ಶಾಸಕ ಜಿ.ಎಚ್. ತಿಪ್ಪಾರೆಡ್ಡಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಮುರುಳಿ, ಮಾಜಿ ಅಧ್ಯಕ್ಷ ಟಿ.ಜಿ. ನರೇಂದ್ರನಾಥ್, ವಿಭಾಗೀಯ ಪ್ರಭಾರಿ ಜಿ.ಎಂ. ಸುರೇಶ್, ಮುಖಂಡರಾದ ಸೇತುರಾಂ, ನಾಗರಾಜ್ ಬೇದ್ರೆ, ದಗ್ಗೆ ಶಿವಪ್ರಕಾಶ್ ಅವರೂ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿತ್ರದುರ್ಗ</strong>: ‘ರಾಜ್ಯದ 58ಸಾವಿರ ಬೂತ್ಗಳಲ್ಲಿ ಜ. 26ರಂದು ಸಿಎಎ, ಎನ್ಆರ್ಸಿ ಪರವಾಗಿ ರಾಷ್ಟ್ರಧ್ವಜ ಹಾರಿಸುವ ಮೂಲಕ ಬಿಜೆಪಿ ಬೂತ್ಮಟ್ಟದ ಅಧ್ಯಕ್ಷರು ಮೋದಿ ಅವರಿಗೆ ಪತ್ರ ಸಂದೇಶ ಕಳಿಸಲಿದ್ದಾರೆ’ ಎಂದು ಬಿಜೆಪಿ ಮುಖಂಡ, ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್ ತಿಳಿಸಿದರು.</p>.<p>‘26ಕ್ಕೆ ಸಿಎಎ ಅಭಿಯಾನ ಮುಕ್ತಾಯವಾಗಲಿದೆ. ಅಂದು ಎಲ್ಲ ಬೂತ್ಗಳಲ್ಲೂ ಸಾರ್ವಜನಿಕರಿಂದ ಸಹಿ ಸಂಗ್ರಹಿಸಿ ಇಲ್ಲಿಂದಲೇ ಮೋದಿ ಅವರನ್ನು ಅಭಿನಂದಿಸುವ ಕಾರ್ಯಕ್ರಮ ಆಯೋಜಿಸಿದ್ದೇವೆ. ಹುಟ್ಟು ಬಟ್ಟೆಯಲ್ಲೇ ದೇಶಕ್ಕೆ ಬಂದವರು ಎಂಬ ಪುಸ್ತಕದ ಕುರಿತು 1ಗಂಟೆ ಚರ್ಚೆಯೂ ನಡೆಯಲಿದೆ’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.</p>.<p>‘ನಾಗರಿಕ ಪೌರತ್ವ ಕಾಯ್ದೆ ವಿಶ್ವದ ಶೇ 99ರಷ್ಟು ರಾಷ್ಟ್ರಗಳಲ್ಲಿ ಜಾರಿಯಲ್ಲಿದೆ. ಈ ಹಿಂದೆ ಗಾಂಧಿಜೀ ಅವರು ಪಾಕ್ ಸೇರಿ ಇತರೆ ರಾಷ್ಟ್ರಗಳಲ್ಲಿ ನೀವು ಜೀವಿಸಲು ಸಾಧ್ಯವಾಗದಿದ್ದರೆ, ಭಾರತಕ್ಕೆ ಬನ್ನಿ. ನಿಮ್ಮನ್ನು ದೇಶ ಸ್ವಾಗತಿಸಲಿದೆ ಎಂದು ಭಾರತೀಯರ ಕುರಿತು ಹೇಳಿದ್ದರು. ಇದನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಪೌರತ್ವ ಕಾಯ್ದೆ ತಿದ್ದುಪಡಿ ಮಾಡಿದೆ’ ಎಂದರು.</p>.<p>‘ತಿದ್ದುಪಡಿಯಲ್ಲಿ ಹೇಳಿಕೊಳ್ಳುವಂಥ ಬದಲಾವಣೆ ಆಗಿಲ್ಲ. ಈ ಮುಂಚೆ 11 ವರ್ಷ ಇದ್ದ ಮಿತಿಯನ್ನು 5ವರ್ಷಕ್ಕೆ ಇಳಿಸಲಾಗಿದೆ. ದೇಶದ ಯಾವೊಬ್ಬ ಪ್ರಜೆಗೂ ಇದರಿಂದ ತೊಂದರೆ ಆಗುವುದಿಲ್ಲ. ಪೌರತ್ವ ರದ್ದಾಗುವುದಿಲ್ಲ’ ಎಂದು ಹೇಳಿದರು.</p>.<p>‘ಗಾಂಧಿ, ನೆಹರು, ಇಂದಿರಾಗಾಂಧಿ, ಲಾಲ್ಬಹದ್ದೂರ್ ಶಾಸ್ತ್ರೀ, ರಾಜೀವ್ಗಾಂಧಿ, ಮನಮೋಹನ್ಸಿಂಗ್ ಕೂಡ ಒಪ್ಪಿಕೊಂಡ ಪೌರತ್ವ ತಿದ್ದುಪಡಿಯನ್ನು ಗಾಂಧಿ ಪರಿವಾರ ಎಂಬುದಾಗಿ ಹೇಳಿಕೊಳ್ಳುವಂಥ ಕಾಂಗ್ರೆಸ್, ಎಡಪಂಥೀಯ ಪಕ್ಷಗಳು ವಿರೋಧಿಸುತ್ತಿರುವುದು ವಿಪರ್ಯಾಸ. ದೇಶದ ಶೇ 90ರಷ್ಟು ಮಂದಿ ಇದರ ಪರವಾಗಿಯೇ ಇದ್ದಾರೆ’ ಎಂದು ತಿಳಿಸಿದರು.</p>.<p>‘ಪಾಕಿಸ್ತಾನದ 1996 ಮಂದಿ ಅಲ್ಪಸಂಖ್ಯಾತರು, ಆಫ್ಗಾನಿಸ್ತಾನದ 361 ಮಂದಿ ಸೇರಿ ಮುಸ್ಲಿಂ ರಾಷ್ಟ್ರಗಳಿಂದ ಇಲ್ಲಿಗೆ ಬಂದ ಸುಮಾರು 5ಸಾವಿರಕ್ಕೂ ಹೆಚ್ಚು ಮಂದಿಗೆ ಈ ಹಿಂದೆಯೇ ಪೌರತ್ವ ನೀಡಲಾಗಿದೆ. ಈಗ ಮತಬ್ಯಾಂಕ್ ರಾಜಕಾರಣಕ್ಕಾಗಿ ವಿರೋಧಿಸುತ್ತಿರುವವರು ರಾಷ್ಟ್ರಕ್ಕೆ ಆಘಾತ ಉಂಡು ಮಾಡುವ ದೇಶ ದ್ರೋಹಿಗಳು’ ಎಂದು ಪುನರುಚ್ಚರಿಸಿದರು.</p>.<p>‘ಸೋನಿಯಾಗಾಂಧಿ, ಅದ್ನಾನ್ ಸಾಮಿ, ತಸ್ಲಿಮಾ ನಸ್ರಿನ್ ಸೇರಿ ಅನೇಕರಿಗೆ ಪೌರತ್ವ ನೀಡಲಾಗಿದೆ. ಕಾಯ್ದೆ ತಿದ್ದುಪಡಿ ನಂತರ ಯಾರನ್ನಾದರೂ ದೇಶ ಬಿಟ್ಟು ಓಡಿಸಲಾಗಿದೆಯೇ’ ಎಂದು ಪ್ರಶ್ನಿಸಿದರು.</p>.<p>ಶಾಸಕ ಜಿ.ಎಚ್. ತಿಪ್ಪಾರೆಡ್ಡಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಮುರುಳಿ, ಮಾಜಿ ಅಧ್ಯಕ್ಷ ಟಿ.ಜಿ. ನರೇಂದ್ರನಾಥ್, ವಿಭಾಗೀಯ ಪ್ರಭಾರಿ ಜಿ.ಎಂ. ಸುರೇಶ್, ಮುಖಂಡರಾದ ಸೇತುರಾಂ, ನಾಗರಾಜ್ ಬೇದ್ರೆ, ದಗ್ಗೆ ಶಿವಪ್ರಕಾಶ್ ಅವರೂ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>