ಭರಣಿ ಮಳೆ ಆರಂಭವಾದಾಗಲೇ ಭೂಮಿ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಬಾಗೂರು ಸುತ್ತಮುತ್ತ ಮಳೆ ಬರುವುದು ತಡವಾಗಿದೆ. ಇತರೆಡೆ ಸಾವೆ ಬಿತ್ತನೆಯಾಗಿದೆ. ಬಾಗೂರಿನಲ್ಲಿ ಸರಿಯಾದ ಸಮಯಕ್ಕೆ ಮಳೆಯಾಗಲಿಲ್ಲ. ಈ ಭಾಗದಲ್ಲಿ ಸಾವೆ ಬಿತ್ತನೆ 20 ದಿನ ತಡವಾಗಿದ್ದು, ಮುಂದೆ ಮಳೆಗಾಳಿಗೆ ತುತ್ತಾಗಬಹುದು. ತಾಲ್ಲೂಕಿನ ರೈತ ಸಂಪರ್ಕ ಕೇಂದ್ರಗಳಲ್ಲಿ ಔಷಧ, ಗೊಬ್ಬರ, ಬೀಜ ಸಮಯಕ್ಕೆ ಸರಿಯಾಗಿ ದೊರೆಯುವಂತಿದ್ದರೆ ಸಾಕು ಎಂದು ಪ್ರಗತಿಪರ ರೈತ ಬಾಗೂರಿನ ವೆಂಕಟೇಶ್ ತಿಳಿಸಿದರು.