ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗನಾಥ್‌ ಪ್ರಾಮಾಣಿಕತೆ ಮೆಚ್ಚಿ ಸನ್ಮಾನಿಸಿದ ಎಸ್‌ಪಿ

Last Updated 28 ಜುಲೈ 2021, 6:16 IST
ಅಕ್ಷರ ಗಾತ್ರ

ಹೊಸದುರ್ಗ: ಪಟ್ಟಣದ ಮುಖ್ಯರಸ್ತೆಯಲ್ಲಿ ಸಿಕ್ಕ ಚಿನ್ನದ ಚೈನ್‌ ಅನ್ನು ಪೊಲೀಸ್ ಠಾಣೆಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದ ಇಲ್ಲಿಯ ವಾಸವಿ ಮೊಬೈಲ್‌ ಶಾಪ್‌ನ ಕಾರ್ಮಿಕ ರಂಗನಾಥ್‌ ಅವರನ್ನು ಈಚೆಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ. ರಾಧಿಕಾ ಸನ್ಮಾನಿಸಿದರು.

ಅವರು ಗುರುವಾರ ಸಂಜೆ ಕೆಲಸದ ನಿಮಿತ್ತ ತಾಲ್ಲೂಕು ಕಚೇರಿಗೆ ಹೋಗಿ ವಾಪಸ್ ಮನೆಗೆ ನಡೆದುಕೊಂಡು ಬರುತ್ತಿದ್ದಾಗ ಮುಖ್ಯರಸ್ತೆ ಪಕ್ಕದಲ್ಲಿ ಚಿನ್ನದ ಚೈನ್‌ ಸಿಕ್ಕಿತ್ತು. ಆಗ ಸ್ಥಳದಲ್ಲಿದ್ದ ಜನರಿಗೆ ತೋರಿಸಿ ವಾರಸುದಾರರ ಬಗ್ಗೆ ವಿಚಾರಿಸಿದರು. ಚೈನ್ ಯಾರದೆಂಬುದು ಅಂತ ತಿಳಿಯಲಿಲ್ಲ. ಆದ್ದರಿಂದ ವಾರಸುದಾರರನ್ನು ಪತ್ತೆ ಮಾಡಿ ಸದರಿ ಚೈನ್‌ ಕೊಡಿ ಅಂತ ಪೊಲೀಸ್‌ ಠಾಣೆಗೆ ತಂದುಕೊಟ್ಟರು.
ನಂತರ ಠಾಣೆಗೆ ಪಂಚರು ಮತ್ತು ಚಿನ್ನದ ಕೆಲಸ ಮಾಡುವವರನ್ನು ಕರೆಯಿಸಿ ತೂಕ ಮಾಡಿಸಲಾಗಿ ಮಿಕ್ಸ್ ಡಿಸೈನಿನ 12 ಗ್ರಾಂ ತೂಕದ ಚಿನ್ನದ ಚೈನ್ ಆಗಿತ್ತು.

ಬೆಲೆ ಸುಮಾರು ₹ 45,000 ಎಂದು ಆಂದಾಜಿಸಲಾಗಿದ್ದು. ಇದನ್ನು ಠಾಣೆಯ ಮಾಲು ಪಟ್ಟಿಯಲ್ಲಿ ನೋಂದಾಯಿಸಿಕೊಂಡು ನ್ಯಾಯಾಲಯದ ಆದೇಶದಂತೆ ಚಿನ್ನದ ಚೈನಿನ ಮಾಲೀಕರು ಸಿಗುವವರೆಗೂ ಪೊಲೀಸ್ ಠಾಣೆಯಲ್ಲಿ ಇಟ್ಟುಕೊಂಡು ತನಿಖೆ ಕೈಗೊಳ್ಳಲಾಗಿದೆ. ರಂಗನಾಥ್‌ ಪ್ರಾಮಾಣಿಕತೆಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT