ಶಾಲೆಯಲ್ಲಿಯೇ ಕೊಳವೆಬಾವಿ ಇದ್ದಿದ್ದರಿಂದ ನೀರಿಗೆ ಸಮಸ್ಯೆ ಇರಲಿಲ್ಲ. ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಸಹಕಾರದಿಂದ ಅಡಿಕೆ ಗಿಡಗಳು ಉತ್ಕೃಷ್ಟವಾಗಿ ಬೆಳೆಯುತ್ತಿದ್ದವು. ಈ ಅಡಿಕೆ ಗಿಡಗಳಿಂದ ಶಾಲೆಗೆ ₹ 50,000ದಿಂದ ₹ 1 ಲಕ್ಷದವರೆಗೂ ಆದಾಯ ಪಡೆಯುವ ನೀರಿಕ್ಷೆ ಹೊಂದಿದ್ದರು. ಜಿಲ್ಲಾ ಪಂಚಾಯಿತಿ ಸಿಇಒ ಸಹ ಈ ತೋಟದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದರು. ಆದರೆ, ಕಳೆದ ಸಾಲಿನಲ್ಲಿ ಮಳೆ ಕೊರತೆಯಿಂದಾಗಿ ಗಿಡಗಳೀಗ ಒಣಗುತ್ತಿದ್ದು, ಅವುಗಳನ್ನು ಉಳಿಸಿಕೊಳ್ಳುವ ಕೆಲಸ ಸಾಗಿದೆ.