<p><strong>ನಾಯಕನಹಟ್ಟಿ</strong>: ಐತಿಹಾಸಿಕ ಗುರು ತಿಪ್ಪೇರುದ್ರಸ್ವಾಮಿ ದೇವಾಲಯದ ಆವರಣದಲ್ಲಿ ಮಂಗಳವಾರ ಬ್ಯಾಂಕ್ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಹುಂಡಿಹಣ ಏಣಿಕೆ ಕಾರ್ಯ ನಡೆಸಿದರು.</p>.<p>60 ದಿನಗಳಲ್ಲಿ ಹೊರಮಠದಲ್ಲಿ ₹ 3,82,485 ಹಾಗೂ ಒಳಮಠದಲ್ಲಿ ₹ 17,72,915 ಸೇರಿ ಒಟ್ಟು ₹21,55,400 ಸಂಗ್ರಹವಾಗಿದೆ.</p>.<p>ಕಳೆದ ವರ್ಷ ಇದೇ ಸಮಯಕ್ಕೆ ಎಣಿಕೆ ಕಾರ್ಯ ಮಾಡಿದಾಗ ಎರಡು ದೇವಾಲಯಗಳಿಂದ ಹುಂಡಿ ಹಾಗೂ ವಿವಿಧ ಸೇವಾರ್ಥಗಳಿಂದ ₹25,54,958 ಸಂಗ್ರಹವಾಗಿತ್ತು. ಲಾಕ್ಡೌನ್ ಘೋಷಿಸಿದ ಕಾರಣ ಎರಡೂ ದೇವಾಲಯಗಳನ್ನು ಮಾರ್ಚ್ 23ರಿಂದ ಬಾಗಿಲು ಮುಚ್ಚಲಾಗಿತ್ತು. ಇದಕ್ಕೂ ಮುನ್ನ ಮಾರ್ಚ್ 19ರಂದು ವಾರ್ಷಿಕ ಮಹಾಜಾತ್ರೆ ನಡೆದಿತ್ತು.</p>.<p>ಮೇ 6ರಂದು ಲಾಕ್ಡೌನ್ ವೇಳೆ ಹುಂಡಿ ತೆರೆದಾಗ ₹ 30,03,743 ಹಣ ಸಂಗ್ರಹವಾಗಿತ್ತು. ನಂತರ ಆ. 31ರವರೆಗೂ ದೇವಾಲಯದ ಬಾಗಿಲು ಮುಚ್ಚಲಾಗಿತ್ತು. ಸೆ.1ರಂದು ದೇವಾಲಯವನ್ನು ತೆರೆದು ಪೂಜೆಗಳು ಆರಂಭಗೊಂಡವು. ಸುಮಾರು 60 ದಿನಗಳಲ್ಲಿ ₹ 21 ಲಕ್ಷ ಹಣ ಸಂಗ್ರಹವಾಗಿದೆ. ಸಂಗ್ರಹವಾದ ಹಣವನ್ನು ದೇವಾಲಯದ ಕೆನರಾ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ ಎಂದು ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಎಸ್.ಪಿ.ಬಿ.ಮಹೇಶ್ ಹೇಳಿದರು.</p>.<p>ಹುಂಡಿ ಹಣ ಎಣಿಕೆ ಕಾರ್ಯದಲ್ಲಿ ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ, ಉಪತಹಶೀಲ್ದಾರ್ ಟಿ.ಜಗದೀಶ್, ಕಂದಾಯ ನಿರೀಕ್ಷಕ ಚೇತನ್ಕುಮಾರ್, ಗ್ರಾಮ ಲೆಕ್ಕಾಧಿಕಾರಿ ಉಮಾ, ಪುಷ್ಪ ಲತಾ, ಸಂತೋಷ್, ಮಂಜುನಾಥ್, ಶಿವ ಮೂರ್ತಿ, ಎಂ.ಬಿ.ಮಹಾಸ್ವಾಮಿ, ಪುರಂದರ್, ವೀರಭದ್ರಪ್ಪ, ಪ್ರಸನ್ನ ಕುಮಾರ್, ಎಸ್.ಸತೀಶ್, ವಿರೂಪಾಕ್ಷಪ್ಪ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನಾಯಕನಹಟ್ಟಿ</strong>: ಐತಿಹಾಸಿಕ ಗುರು ತಿಪ್ಪೇರುದ್ರಸ್ವಾಮಿ ದೇವಾಲಯದ ಆವರಣದಲ್ಲಿ ಮಂಗಳವಾರ ಬ್ಯಾಂಕ್ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಹುಂಡಿಹಣ ಏಣಿಕೆ ಕಾರ್ಯ ನಡೆಸಿದರು.</p>.<p>60 ದಿನಗಳಲ್ಲಿ ಹೊರಮಠದಲ್ಲಿ ₹ 3,82,485 ಹಾಗೂ ಒಳಮಠದಲ್ಲಿ ₹ 17,72,915 ಸೇರಿ ಒಟ್ಟು ₹21,55,400 ಸಂಗ್ರಹವಾಗಿದೆ.</p>.<p>ಕಳೆದ ವರ್ಷ ಇದೇ ಸಮಯಕ್ಕೆ ಎಣಿಕೆ ಕಾರ್ಯ ಮಾಡಿದಾಗ ಎರಡು ದೇವಾಲಯಗಳಿಂದ ಹುಂಡಿ ಹಾಗೂ ವಿವಿಧ ಸೇವಾರ್ಥಗಳಿಂದ ₹25,54,958 ಸಂಗ್ರಹವಾಗಿತ್ತು. ಲಾಕ್ಡೌನ್ ಘೋಷಿಸಿದ ಕಾರಣ ಎರಡೂ ದೇವಾಲಯಗಳನ್ನು ಮಾರ್ಚ್ 23ರಿಂದ ಬಾಗಿಲು ಮುಚ್ಚಲಾಗಿತ್ತು. ಇದಕ್ಕೂ ಮುನ್ನ ಮಾರ್ಚ್ 19ರಂದು ವಾರ್ಷಿಕ ಮಹಾಜಾತ್ರೆ ನಡೆದಿತ್ತು.</p>.<p>ಮೇ 6ರಂದು ಲಾಕ್ಡೌನ್ ವೇಳೆ ಹುಂಡಿ ತೆರೆದಾಗ ₹ 30,03,743 ಹಣ ಸಂಗ್ರಹವಾಗಿತ್ತು. ನಂತರ ಆ. 31ರವರೆಗೂ ದೇವಾಲಯದ ಬಾಗಿಲು ಮುಚ್ಚಲಾಗಿತ್ತು. ಸೆ.1ರಂದು ದೇವಾಲಯವನ್ನು ತೆರೆದು ಪೂಜೆಗಳು ಆರಂಭಗೊಂಡವು. ಸುಮಾರು 60 ದಿನಗಳಲ್ಲಿ ₹ 21 ಲಕ್ಷ ಹಣ ಸಂಗ್ರಹವಾಗಿದೆ. ಸಂಗ್ರಹವಾದ ಹಣವನ್ನು ದೇವಾಲಯದ ಕೆನರಾ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ ಎಂದು ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಎಸ್.ಪಿ.ಬಿ.ಮಹೇಶ್ ಹೇಳಿದರು.</p>.<p>ಹುಂಡಿ ಹಣ ಎಣಿಕೆ ಕಾರ್ಯದಲ್ಲಿ ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ, ಉಪತಹಶೀಲ್ದಾರ್ ಟಿ.ಜಗದೀಶ್, ಕಂದಾಯ ನಿರೀಕ್ಷಕ ಚೇತನ್ಕುಮಾರ್, ಗ್ರಾಮ ಲೆಕ್ಕಾಧಿಕಾರಿ ಉಮಾ, ಪುಷ್ಪ ಲತಾ, ಸಂತೋಷ್, ಮಂಜುನಾಥ್, ಶಿವ ಮೂರ್ತಿ, ಎಂ.ಬಿ.ಮಹಾಸ್ವಾಮಿ, ಪುರಂದರ್, ವೀರಭದ್ರಪ್ಪ, ಪ್ರಸನ್ನ ಕುಮಾರ್, ಎಸ್.ಸತೀಶ್, ವಿರೂಪಾಕ್ಷಪ್ಪ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>