'ನಮಗೆ ಯಾವ ಕ್ವಾರಂಟೈನ್ ಬೇಡ ಊರಿಗೆ ಕಳುಹಿಸಿ' ಎಂದು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ತಾಲ್ಲೂಕು ಆಡಳಿತ ಜಿಲ್ಲಾಧಿಕಾರಿ ಮೊರೆ ಹೋಯಿತು. ಊಟ, ತಿಂಡಿಯನ್ನು ತಿನ್ನದೇ ಸಿಬ್ಬಂದಿ ಜತೆ ಗಲಾಟೆ ಮಾಡುತ್ತಿದ್ದ ಕಾರ್ಮಿಕರ ಜತೆ ಜಿಲ್ಲಾಧಿಕಾರಿ ಮಾತುಕತೆ ನಡೆಸಿ ತುಸು ಸಮಾಧಾನಪಡಿಸಿದರು. ಆಗ ಕಾರ್ಮಿಕರು ಸಂಜೆಯ ವೇಳೆ ಊಟ ಮಾಡಿದರು.