1960ರ ದಶಕದಿಂದ ಬೆಳೆಗಳ ಇಳುವರಿಯನ್ನು ಹೆಚ್ಚು ಮಾಡಲು ರಾಸಾಯನಿಕ ಗೊಬ್ಬರ, ಅಧಿಕ ಇಳುವರಿ ತಳಿಗಳು, ಸಸ್ಯ ಸಂರಕ್ಷಣಾ ಔಷಧ, ಕಳೆ ನಾಶಕ, ಸಸ್ಯ ಪ್ರಚೋದಕಗಳು ಬಳಕೆಗೆ ಬಂದವು. ಅವುಗಳನ್ನು ವಿವೇಚನೆಯಿಂದ ಬಳಸಿದ್ದರಿಂದ ಬೆಳೆಗಳ ಉತ್ಪಾದನೆ ಹೆಚ್ಚಾಯಿತು. ಆದರೆ ಇತ್ತೀಚಿನ ದಿನಗಳಲ್ಲಿ ಅಗತ್ಯತೆ ಮೀರಿ ಅವುಗಳನ್ನು ಬಳಕೆ ಮಾಡುತ್ತಿರುವುದರಿಂದ ಮಣ್ಣಿನ ಫಲವತ್ತತೆ ಹಾಳಾಗುತ್ತಿದೆ ಎಂದು ತಿಳಿಸಿದರು.