ಈ ಬಗ್ಗೆ ಮಂಗಳವಾರ ಪ್ರತಿಕ್ರಿಯಿಸಿದ ಅಶ್ವತ್ಥನಾರಾಯಣ, ‘ಹಂಗಾಮಿ ಕುಲಪತಿ ನೇಮಕ ಪಾರದರ್ಶಕ, ಕಾನೂನು ಪ್ರಕಾರವೇ ಆಗಿದೆ. ರಾಜ್ಯಪಾಲರು ಈ ನೇಮಕ ಮಾಡಿದ್ದಾರೆ. ಇದರಲ್ಲಿ ನನ್ನ ಯಾವುದೇ ಪಾತ್ರ ಇಲ್ಲ. ಕಾನೂನು ವ್ಯಾಪ್ತಿ ಮೀರಿ ನೇಮಕ ಮಾಡಲು ಆಗುವುದಿಲ್ಲ, ನೇಮಕದ ಹಿಂದೆ ನನ್ನ ಪ್ರಭಾವ ಇದೆ ಎನ್ನುವುದು ಸುಳ್ಳು. ಎಲ್ಲ ಊಹಾಪೋಹ’ ಎಂದರು.