ಇತ್ತ ಯೋಗೇಶ್ವರ್ ಯಾರ ಸಂಪರ್ಕಕ್ಕೂ ಲಭ್ಯವಾಗದೇ ಇರುವುದು, ತಮ್ಮ ಸ್ವಕ್ಷೇತ್ರ ಚನ್ನಪಟ್ಟಣದತ್ತಲೂ ಬರದೇ ಇರುವುದು ಈ ಎಲ್ಲ ಅನುಮಾನಗಳನ್ನು ಪುಷ್ಠೀಕರಿಸುವಂತೆ ಇವೆ. ಈ ಕುರಿತು ಪ್ರತಿಕ್ರಿಯೆ ಪಡೆಯಲು ಅವರು ಮೊಬೈಲ್ ಕರೆ ಸ್ವೀಕರಿಸಲಿಲ್ಲ. ಅವರ ಆಪ್ತರು ಈ ಬಗ್ಗೆ ಪ್ರತಿಕ್ರಿಯೆ ನೀಡುತ್ತಿಲ್ಲ.
ಬರಿಗೈನಲ್ಲಿ ವಾಪಸ್
ಗಣೇಶ್ ಬಂಧನಕ್ಕೆ ತೆರಳಿದ್ದ ರಾಮನಗರ ಪೊಲೀಸರು ಬಳ್ಳಾರಿ, ಮುಂಬೈ, ಪುಣೆ ಮೊದಲಾದ ಕಡೆ ಸುತ್ತಾಟ ನಡೆಸಿ ವಾಪಸ್ ಆಗಿದ್ದಾರೆ. ಘಟನೆ ನಡೆದು ಹತ್ತು ದಿನ ಕಳೆದರೂ ಆರೋಪಿಯ ಸುಳಿವು ಮಾತ್ರ ಪತ್ತೆಯಾಗಿಲ್ಲ.