<p><strong>ವಿಜಯಪುರ:</strong>ಜಿಲ್ಲೆಯ ಕೆಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕುಗಳಲ್ಲಿ ಯಾವುದೇ ಮುನ್ಸೂಚನೆ ನೀಡದೆ, ರೈತರಿಗೆ ಮಂಜೂರಾದ ಬೆಳೆ ಸಾಲದ ಮೊತ್ತದಲ್ಲಿ ಶೇ 10ರಿಂದ ಶೇ 20ರಷ್ಟು ನಗದನ್ನು ಮುದ್ದತ್ತು ಠೇವಣಿ (ಎಫ್ಡಿ) ಮಾಡಿಕೊಳ್ಳಲಾಗಿದೆ ಎಂಬ ದೂರು ಕೇಳಿ ಬಂದಿದೆ.</p>.<p>ಈ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಹಕಾರಿ ಬ್ಯಾಂಕುಗಳಲ್ಲಿ ರೈತರು ಪಡೆದಿದ್ದ ಬೆಳೆ ಸಾಲದಲ್ಲಿ ₹ 50,000 ಮೊತ್ತವನ್ನು ಮನ್ನಾ ಮಾಡಿದ್ದರು. ಸಾಲ ಪಡೆದ ದಿನಾಂಕದ ವರ್ಷಕ್ಕೆ ಸರಿಯಾಗಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್ಗಳು ಆಯಾ ರೈತರಿಗೆ ಹೊಸ ಸಾಲವನ್ನು ಮಂಜೂರು ಮಾಡಿವೆ. ಆದರೆ, ಮಂಜೂರಾದ ಸಾಲದ ಮೊತ್ತದಲ್ಲೇ ₹ 5,000, ₹ 10,000 ನಗದನ್ನು ತಮ್ಮಲ್ಲೇ ಮುದ್ದತ್ತು ಠೇವಣಿಯನ್ನಾಗಿಟ್ಟುಕೊಂಡಿರುವುದಕ್ಕೆ ರೈತ ಸಮೂಹದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.</p>.<p><strong>ಮಾಹಿತಿಯನ್ನೇ ನೀಡಿಲ್ಲ..!</strong></p>.<p>‘ಇಂಡಿ ತಾಲ್ಲೂಕಿನ ಅಗರಖೇಡದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕಿನಲ್ಲಿ ಈ ಹಿಂದೆ ₹ 47,000 ಸಾಲ ಪಡೆದಿದ್ದೆ. ಹಿಂದಿನ ಸರ್ಕಾರ ಆ ಸಾಲವನ್ನು ಮನ್ನಾ ಮಾಡಿತ್ತು. ಪಾಳಿ ಪ್ರಕಾರ 2018ರ ಜೂನ್ 4ರಂದು ಸೊಸೈಟಿಯವರು ಹೊಸದಾಗಿ ₹ 53,000 ಸಾಲ ಮಂಜೂರು ಮಾಡಿ, ಉಳಿತಾಯ ಖಾತೆಗೆ ಜಮೆ ಮಾಡಿದ್ದಾರೆ. ಆದರೆ, ಇದರ ಜತೆಯಲ್ಲಿ ಅದೇ ದಿನ ನನಗೆ ಯಾವುದೇ ಮಾಹಿತಿ ನೀಡದೇ ₹ 10,500 ಮೊತ್ತವನ್ನು, ಮುದ್ದತ್ತು ಠೇವಣಿಯನ್ನಾಗಿಟ್ಟುಕೊಂಡಿದ್ದಾರೆ’ ಎಂದು ಸಹಕಾರಿ ಬ್ಯಾಂಕಿನ ಷೇರುದಾರ ಸದಸ್ಯರಾಗಿರುವ ವಿಲಾಸ ಶಿಂಧೆ ಅಸಮಾಧಾನ ವ್ಯಕ್ತಪಡಿಸಿದರು.</p>.<p>’ಅನುಮತಿ ಪಡೆಯದೇ ಮುದ್ದತ್ತು ಠೇವಣಿಗೆ ಹಣ ವರ್ಗಾಯಿಸಿರುವುದರ ಕುರಿತಂತೆ ಡಿಸಿಸಿ ಬ್ಯಾಂಕಿನ ಇಂಡಿ ಶಾಖೆಯಲ್ಲಿ ವಿಚಾರಿಸಿದರೆ, ‘ನಿಮ್ಮ ಮೊತ್ತಕ್ಕೆ ಸಂಬಂಧಿಸಿದ ರಸೀದಿಯನ್ನು ಅಗರಖೇಡ ಸೊಸೈಟಿಗೇ ಕಳುಹಿಸಿಕೊಟ್ಟಿದ್ದೇವೆ.ಅಲ್ಲಿಯೇ ವಿಚಾರಿಸಿಕೊಳ್ಳಿ’ ಎಂದಷ್ಟೇ ಹೇಳಿದರು. ಇಲ್ಲಿಯೂ ಸಮರ್ಪಕ ಉತ್ತರ ಸಿಗಲಿಲ್ಲ’ ಎಂದರು.</p>.<p>‘ಮೊದಲಿಗೆ ನಾವೇ ಕಷ್ಟದಲ್ಲಿದ್ದೇವೆ. ಬ್ಯಾಂಕುಗಳಲ್ಲಿ ಎಫ್ಡಿ ಮಾಡುವವರೆಲ್ಲ ರೊಕ್ಕ ಇದ್ದವರು. ಸಾಲದ ಮೊತ್ತದಲ್ಲೇ ಠೇವಣಿಗೆಂದು ಕಡಿತ ಮಾಡಿಕೊಂಡಿದ್ದು ಅನ್ಯಾಯ. ಹೀಗೇಕೆ ಮಾಡಿದ್ದಾರೆ ಎಂಬುದನ್ನು ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾಗಿರುವ ಆರೋಗ್ಯ ಸಚಿವ ಶಿವಾನಂದ ಪಾಟೀಲರೇ ಉತ್ತರಿಸಬೇಕು. ಈ ನಿರ್ಧಾರ ಸರ್ಕಾರದ ಸುತ್ತೋಲೆಯೋ ? ಅಥವಾ ಅವರದೇ ನಿರ್ಣಯವೋ ಎಂಬುದನ್ನು ಸ್ಪಷ್ಟಪಡಿಸಬೇಕು’ ಎಂದು ಆಕ್ರೋಶ ವ್ಯಕ್ತಪಡಿಸಿದರು.</p>.<p><strong>ಇದು ತಮ್ಮೊಬ್ಬರ ಸ್ಥಿತಿಯಲ್ಲ;</strong> ಜಿಲ್ಲೆಯ ಸಾವಿರಾರು ರೈತರ ಅಸಹಾಯಕ ಸ್ಥಿತಿ ಎಂದು ವಿಲಾಸ ಶಿಂಧೆ ಅಲವತ್ತುಕೊಂಡರು.</p>.<p>ಬಲವಂತವಾಗಿ ಎಫ್ಡಿ ಮಾಡ್ತಿಲ್ಲ. ಸೊಸೈಟಿಗಳ ಅಭಿವೃದ್ಧಿಗಾಗಿ ಸ್ಥಳೀಯ ಆಡಳಿತ ಮಂಡಳಿಯೇ ರೈತರ ಮನವೊಲಿಸಿ ಮುದ್ದತ್ತು ಠೇವಣಿ ಮಾಡಿಕೊಳ್ಳುತ್ತಿದೆ. ಜತೆಗೆ ಷೇರುಧನವನ್ನು ಪಡೆದಿದೆ.<br />- <strong>ಕೆ.ಬಿ.ರಾಜಣ್ಣ, ಸಿಇಒ, ವಿಜಯಪುರ ಡಿಸಿಸಿ ಬ್ಯಾಂಕ್</strong></p>.<p>ಮಾಹಿತಿ ನೀಡದೇ ಸಾಲದ ಮೊತ್ತದಲ್ಲೇ ₹ 10000 ನಗದನ್ನು ಮುದ್ದತ್ತು ಠೇವಣಿಯಾಗಿ ಇಟ್ಟುಕೊಂಡಿದ್ದಾರೆ. ಕೇಳಿದರೆ, ‘ಎಲ್ಲೆಡೆಯೂ ಮಾಡಿದ್ದಾರೆ. ನಾವೂ ಮಾಡಿದ್ದೇವೆ’ ಎನ್ನುತ್ತಾರೆ<br />-<strong> ಭೋಗಣ್ಣ ಕತ್ತಿ, ಕಡಣಿ ಸೊಸೈಟಿ ಸಾಲಗಾರ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ:</strong>ಜಿಲ್ಲೆಯ ಕೆಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕುಗಳಲ್ಲಿ ಯಾವುದೇ ಮುನ್ಸೂಚನೆ ನೀಡದೆ, ರೈತರಿಗೆ ಮಂಜೂರಾದ ಬೆಳೆ ಸಾಲದ ಮೊತ್ತದಲ್ಲಿ ಶೇ 10ರಿಂದ ಶೇ 20ರಷ್ಟು ನಗದನ್ನು ಮುದ್ದತ್ತು ಠೇವಣಿ (ಎಫ್ಡಿ) ಮಾಡಿಕೊಳ್ಳಲಾಗಿದೆ ಎಂಬ ದೂರು ಕೇಳಿ ಬಂದಿದೆ.</p>.<p>ಈ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಹಕಾರಿ ಬ್ಯಾಂಕುಗಳಲ್ಲಿ ರೈತರು ಪಡೆದಿದ್ದ ಬೆಳೆ ಸಾಲದಲ್ಲಿ ₹ 50,000 ಮೊತ್ತವನ್ನು ಮನ್ನಾ ಮಾಡಿದ್ದರು. ಸಾಲ ಪಡೆದ ದಿನಾಂಕದ ವರ್ಷಕ್ಕೆ ಸರಿಯಾಗಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್ಗಳು ಆಯಾ ರೈತರಿಗೆ ಹೊಸ ಸಾಲವನ್ನು ಮಂಜೂರು ಮಾಡಿವೆ. ಆದರೆ, ಮಂಜೂರಾದ ಸಾಲದ ಮೊತ್ತದಲ್ಲೇ ₹ 5,000, ₹ 10,000 ನಗದನ್ನು ತಮ್ಮಲ್ಲೇ ಮುದ್ದತ್ತು ಠೇವಣಿಯನ್ನಾಗಿಟ್ಟುಕೊಂಡಿರುವುದಕ್ಕೆ ರೈತ ಸಮೂಹದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.</p>.<p><strong>ಮಾಹಿತಿಯನ್ನೇ ನೀಡಿಲ್ಲ..!</strong></p>.<p>‘ಇಂಡಿ ತಾಲ್ಲೂಕಿನ ಅಗರಖೇಡದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕಿನಲ್ಲಿ ಈ ಹಿಂದೆ ₹ 47,000 ಸಾಲ ಪಡೆದಿದ್ದೆ. ಹಿಂದಿನ ಸರ್ಕಾರ ಆ ಸಾಲವನ್ನು ಮನ್ನಾ ಮಾಡಿತ್ತು. ಪಾಳಿ ಪ್ರಕಾರ 2018ರ ಜೂನ್ 4ರಂದು ಸೊಸೈಟಿಯವರು ಹೊಸದಾಗಿ ₹ 53,000 ಸಾಲ ಮಂಜೂರು ಮಾಡಿ, ಉಳಿತಾಯ ಖಾತೆಗೆ ಜಮೆ ಮಾಡಿದ್ದಾರೆ. ಆದರೆ, ಇದರ ಜತೆಯಲ್ಲಿ ಅದೇ ದಿನ ನನಗೆ ಯಾವುದೇ ಮಾಹಿತಿ ನೀಡದೇ ₹ 10,500 ಮೊತ್ತವನ್ನು, ಮುದ್ದತ್ತು ಠೇವಣಿಯನ್ನಾಗಿಟ್ಟುಕೊಂಡಿದ್ದಾರೆ’ ಎಂದು ಸಹಕಾರಿ ಬ್ಯಾಂಕಿನ ಷೇರುದಾರ ಸದಸ್ಯರಾಗಿರುವ ವಿಲಾಸ ಶಿಂಧೆ ಅಸಮಾಧಾನ ವ್ಯಕ್ತಪಡಿಸಿದರು.</p>.<p>’ಅನುಮತಿ ಪಡೆಯದೇ ಮುದ್ದತ್ತು ಠೇವಣಿಗೆ ಹಣ ವರ್ಗಾಯಿಸಿರುವುದರ ಕುರಿತಂತೆ ಡಿಸಿಸಿ ಬ್ಯಾಂಕಿನ ಇಂಡಿ ಶಾಖೆಯಲ್ಲಿ ವಿಚಾರಿಸಿದರೆ, ‘ನಿಮ್ಮ ಮೊತ್ತಕ್ಕೆ ಸಂಬಂಧಿಸಿದ ರಸೀದಿಯನ್ನು ಅಗರಖೇಡ ಸೊಸೈಟಿಗೇ ಕಳುಹಿಸಿಕೊಟ್ಟಿದ್ದೇವೆ.ಅಲ್ಲಿಯೇ ವಿಚಾರಿಸಿಕೊಳ್ಳಿ’ ಎಂದಷ್ಟೇ ಹೇಳಿದರು. ಇಲ್ಲಿಯೂ ಸಮರ್ಪಕ ಉತ್ತರ ಸಿಗಲಿಲ್ಲ’ ಎಂದರು.</p>.<p>‘ಮೊದಲಿಗೆ ನಾವೇ ಕಷ್ಟದಲ್ಲಿದ್ದೇವೆ. ಬ್ಯಾಂಕುಗಳಲ್ಲಿ ಎಫ್ಡಿ ಮಾಡುವವರೆಲ್ಲ ರೊಕ್ಕ ಇದ್ದವರು. ಸಾಲದ ಮೊತ್ತದಲ್ಲೇ ಠೇವಣಿಗೆಂದು ಕಡಿತ ಮಾಡಿಕೊಂಡಿದ್ದು ಅನ್ಯಾಯ. ಹೀಗೇಕೆ ಮಾಡಿದ್ದಾರೆ ಎಂಬುದನ್ನು ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾಗಿರುವ ಆರೋಗ್ಯ ಸಚಿವ ಶಿವಾನಂದ ಪಾಟೀಲರೇ ಉತ್ತರಿಸಬೇಕು. ಈ ನಿರ್ಧಾರ ಸರ್ಕಾರದ ಸುತ್ತೋಲೆಯೋ ? ಅಥವಾ ಅವರದೇ ನಿರ್ಣಯವೋ ಎಂಬುದನ್ನು ಸ್ಪಷ್ಟಪಡಿಸಬೇಕು’ ಎಂದು ಆಕ್ರೋಶ ವ್ಯಕ್ತಪಡಿಸಿದರು.</p>.<p><strong>ಇದು ತಮ್ಮೊಬ್ಬರ ಸ್ಥಿತಿಯಲ್ಲ;</strong> ಜಿಲ್ಲೆಯ ಸಾವಿರಾರು ರೈತರ ಅಸಹಾಯಕ ಸ್ಥಿತಿ ಎಂದು ವಿಲಾಸ ಶಿಂಧೆ ಅಲವತ್ತುಕೊಂಡರು.</p>.<p>ಬಲವಂತವಾಗಿ ಎಫ್ಡಿ ಮಾಡ್ತಿಲ್ಲ. ಸೊಸೈಟಿಗಳ ಅಭಿವೃದ್ಧಿಗಾಗಿ ಸ್ಥಳೀಯ ಆಡಳಿತ ಮಂಡಳಿಯೇ ರೈತರ ಮನವೊಲಿಸಿ ಮುದ್ದತ್ತು ಠೇವಣಿ ಮಾಡಿಕೊಳ್ಳುತ್ತಿದೆ. ಜತೆಗೆ ಷೇರುಧನವನ್ನು ಪಡೆದಿದೆ.<br />- <strong>ಕೆ.ಬಿ.ರಾಜಣ್ಣ, ಸಿಇಒ, ವಿಜಯಪುರ ಡಿಸಿಸಿ ಬ್ಯಾಂಕ್</strong></p>.<p>ಮಾಹಿತಿ ನೀಡದೇ ಸಾಲದ ಮೊತ್ತದಲ್ಲೇ ₹ 10000 ನಗದನ್ನು ಮುದ್ದತ್ತು ಠೇವಣಿಯಾಗಿ ಇಟ್ಟುಕೊಂಡಿದ್ದಾರೆ. ಕೇಳಿದರೆ, ‘ಎಲ್ಲೆಡೆಯೂ ಮಾಡಿದ್ದಾರೆ. ನಾವೂ ಮಾಡಿದ್ದೇವೆ’ ಎನ್ನುತ್ತಾರೆ<br />-<strong> ಭೋಗಣ್ಣ ಕತ್ತಿ, ಕಡಣಿ ಸೊಸೈಟಿ ಸಾಲಗಾರ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>