‘ಮಾನವ ಸಮಾಜದ ಬೆಳವಣಿಗೆ ಆದಿ ಮಾನವರಿಂದ ಹಿಡಿದು ಇಂದಿನ ತಾಂತ್ರಿಕ ಯುಗದವರೆಗೆ ಚಿತ್ರ ಜಗತ್ತು ತನ್ನದೇ ಆದ ಛಾಪು ಮೂಡಿಸಿದೆ. ಸಮಾಜದ ಆರಂಭದ ಕಾಲಘಟ್ಟದಲ್ಲಿ ಸಮಾಜ ಕೇಂದ್ರಿತವಾಗಿದ್ದ ಚಿತ್ರಕಲೆ ಬರುಬರುತ್ತಾ ರಾಜಾಶ್ರಯವನ್ನು ಪಡೆದು ಸೀಮಿತವಾಗತೊಡಗಿತು. ಯುರೋಪಿನ ಕ್ರಾಂತಿ, ನವೋದಯ ಚಳವಳಿ, ರಷ್ಯಾ ಕ್ರಾಂತಿ ಫಲಪ್ರದವಾಗಿ ತನ್ನ ಸಾಮಾಜಿಕ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿತು’ ಎಂದರು.‘ಚಿತ್ರಕಲಾವಿದರು ಸಮಾಜದ ಕೂಸು ಎನ್ನುವುದನ್ನು ಮನಗಂಡು ತಮ್ಮ ನೈಜ ಜವಾಬ್ದಾರಿಯನ್ನು ನಿರ್ವಹಿಸಬೇಕು. ಕೇವಲ ಸ್ಥಳೀಯವಾಗಿ ಪ್ರದರ್ಶನ ಕೈಗೊಳ್ಳದೆ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸಿಂಧನೂರಿನ, ಜಿಲ್ಲೆಯ ಕಲಾವಿದರು ತಮ್ಮ ಪ್ರತಿಭೆಯನ್ನು ಮೆರೆಯಬೇಕು. ಆ ಮೂಲಕ ಲಲಿತಕಲಾ ಕ್ಷೇತ್ರದಲ್ಲಿ ಅಚ್ಚಳಿಯದ ಸಾಧನೆಯನ್ನು ಮಾಡಬೇಕು’ ಎಂದು ಹೇಳಿದರು.