ರಾಮಾಯಣ ಪಾರಾಯಣದಲ್ಲಿ ಶ್ರದ್ಧೆ, ಎರಡು ತಾಸು ಕುಳಿತುಕೊಳ್ಳುವ ಕ್ಷಮತೆ ಇರುವ ಹಿರಿ–ಕಿರಿಯರು, ಮಹಿಳೆಯರು, ಪುರುಷರು ಸಮಾಜದ ಎಲ್ಲ ವರ್ಗದವರು ಪಾಲ್ಗೊಳ್ಳಲು ಅವಕಾಶವಿದೆ. ಈಗಾಗಲೇ 24 ತಂಡಗಳಿಗೆ ಪ್ರತ್ಯೇಕ ವಾಟ್ಸ್ಆ್ಯಪ್ ಗ್ರೂಪ್ ರಚಿಸಲಾಗಿದ್ದು, ತರಬೇತಿ, ಮನನ ಕಾರ್ಯಗಳು ಪ್ರಾರಂಭವಾಗಿವೆ. ಪಂಡಿತರು, ಸಾಹಿತಿಗಳು, ಸಂಸ್ಕೃತ ಪಾಠಶಾಲೆ ವಿದ್ಯಾರ್ಥಿಗಳು, ಭಜನಾ ತಂಡಗಳು ಸಹ ಭಾಗಿಯಾಗಬಹುದು ಎಂದು ‘ಸಂಸ್ಕೃತ ಭಾರತೀ’ಯ ಅಖಿಲ ಭಾರತ ಪ್ರಶಿಕ್ಷಣ ಪ್ರಮುಖ ವಿಶ್ವಾಸ್ ಎಚ್.ಆರ್ ಪ್ರತಿಕ್ರಿಯಿಸಿದರು.