‘ಈ ಭಾಗದಲ್ಲೂ ಪ್ರತಿಭಾವಂತ ವಕೀಲರಿದ್ದು, ಪ್ರತಿ ಸಂದರ್ಭದಲ್ಲೂ ಇಲ್ಲಿನ ವಕೀಲರನ್ನು ಅಲಕ್ಷಿಸಲಾಗುತ್ತಿದೆ. ಮುಖ್ಯ ನ್ಯಾಯಮೂರ್ತಿಗಳು, ಕೊಲಿಜಿಯಂ ಮತ್ತು ಇತರ ನೇಮಕಾತಿ ಅಧಿಕಾರ ಹೊಂದಿರುವವರ ಗಮನ ಸೆಳೆಯಲು ಪ್ರತಿಭಟನೆ ಮುಂದುವರಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಇದಕ್ಕೆ ಸಕಾರಾತ್ಮಕ ಸ್ಪಂದನೆ ದೊರೆಯದಿದ್ದರೆ, ಪ್ರತಿಭಟನೆಯನ್ನು ಈ ಭಾಗದ ಎಲ್ಲ ನ್ಯಾಯಾಲಯಗಳಿಗೂ ವಿಸ್ತರಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.