ಮರ ಕತ್ತರಿಸುತ್ತಿದ್ದಾಗ ಪ್ರಶಾಂತ್ ಆಯತಪ್ಪಿ ಕೆಳಗೆ ಬಿದ್ದರು. ಯಂತ್ರವು ಅವರ ಕೈಯಿಂದ ಜಾರಿ ಕುತ್ತಿಗೆ ಭಾಗಕ್ಕೆ ತುಗುಲಿತು. ಯಂತ್ರ ಚಾಲನೆಯಲ್ಲಿದ್ದ ಕಾರಣ ಗಂಭೀರವಾಗಿ ಗಾಯಗೊಂಡರು. ತಕ್ಷಣವೇ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ದಾರೆ. ಮೃತರ ಸಹೋದರ ಪ್ರಮೋದ್ ನೀಡಿರುವ ದೂರಿನಂತೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.