‘ರಾಜ್ಯ ಸರ್ಕಾರ ಜೀವನ ಸಾರ್ಥಕತೆ ಪೋರ್ಟಲ್ನಲ್ಲಿ ಮೂತ್ರಪಿಂಡ ಕಸಿಗಾಗಿ ನೊಂದಾಯಿಸಿದ್ದ ಆಸ್ಪತ್ರೆಯ ಇಬ್ಬರು ರೋಗಿಗಳಿಗೆ ಒಂದೇ ದಿನ ದಾನಿಯೊಬ್ಬರ ಮೂತ್ರಪಿಂಡಗಳು ಸಿಕ್ಕವು. ಇಬ್ಬರೂ ರೋಗಿಗಳಿಗೆ ಮೂತ್ರಪಿಂಡ ಕಸಿಯನ್ನು 6– 7 ಗಂಟೆಗಳಲ್ಲಿ ಪೂರ್ಣಗೊಳಿಸಬೇಕಿತ್ತು. ಈ ಶಸ್ತ್ರಚಿಕಿತ್ಸೆಯನ್ನು ಆಸ್ಪತ್ರೆಯ ತಜ್ಞ ಶಸ್ತ್ರಚಿಕಿತ್ಸಕರ ತಂಡ ಯಶಸ್ವಿಯಾಗಿ ನಿಭಾಯಿಸಿದೆ. ಕಸಿ ಶಸ್ತ್ರಚಿಕಿತ್ಸಕರಾದ ಡಾ.ಪ್ರೀತಮ್ ಶರ್ಮ, ಡಾ.ರೋಶನ್, ಮೂತ್ರರೋಗ ತಜ್ಞ ಡಾ.ರಾಘವೇಂದ್ರ ಕಾಮತ್, ಅರಿವಳಿಕೆ ತಜ್ಞ ಡಾ.ಹರೀಶ್ ಕಾರಂತ್, ಕಸಿ ಸಂಯೋಜಕಿ ಸೌಮ್ಯಾ, ಡಯಾಲಿಸಿಸ್ ವಿಭಾಗದ ಲೀಲಾವತಿ ಹೆಗ್ಡೆ, ಸವಿನಾ ರೋಶ್ನಿ, ಶಸ್ತ್ರಚಿಕಿತ್ಸಾ ಕೊಠಡಿಯ ಸಿಬ್ಬಂದಿ ಮಹಾಬಲ ಅವರ ನೆರವಿನಿಂದ ಇದು ಸಾಧ್ಯವಾಗಿದೆ‘ ಎಂದು ಶಸ್ತ್ರಚಿಕಿತ್ಸೆಯ ನೇತೃತ್ವ ವಹಿಸಿದ್ದ ಡಾ.ಪ್ರಶಾಂತ್ ಮಾರ್ಲ ತಿಳಿಸಿದರು.