‘ಮಂಗಳೂರು ನಗರ, ಸುರತ್ಕಲ್ ಮತ್ತು ಗುರುಪುರ ಹೋಬಳಿಗಳ ಆಟೊರಿಕ್ಷಾಗಳ ಮೀಟರ್ ಪ್ರಮಾಣಪತ್ರವನ್ನು ಈ ಹಿಂದಿನಂತೆ ಮಂಗಳೂರಿನಲ್ಲೇ ನೀಡುವ ಕುರಿತೂ ಸಾರಿಗೆ ಸಚಿವರ ಗಮನ ಸೆಳೆದಿದ್ದೇನೆ. ಈ ಹಿಂದೆ ಮೀಟರ್ಗಳ ಪ್ರಮಾಣಪತ್ರವನ್ನು ಮಂಗಳೂರಿನ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಮಾಪನಾ ನಿರೀಕ್ಷಣಾ ಕಚೇರಿಯಲ್ಲಿ ಮುದ್ರಿಸಿ ನೀಡಲಾಗುತಿತ್ತು. ಆದರೆ, ಈಚೆಗೆ ಸಿಬ್ಬಂದಿ ಕೊರತೆಯಿಂದ ಮೂಡುಬಿದಿರೆಯಲ್ಲಿ ಪ್ರಮಾಣಪತ್ರ ಪಡೆಯುವ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಆಟೊ ಚಾಲಕರಿಗೆ ಸಮಸ್ಯೆ ಉಂಟಾಗುತ್ತಿದೆ’ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.