ಅಲ್ಲಿಂದ ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನ, ಪಣಂಬೂರು ದೊಡ್ಡಮನೆ ಶ್ರೀಕಾಂತು ಶೆಟ್ಟಿಗಾರ ಕುಟುಂಬಸ್ಥರ ಧರ್ಮ ನೇಮೋತ್ಸವಕ್ಕೆ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು. ಮಧ್ಯಾಹ್ನ ಬಂಟ್ವಾಳ ತಾಲ್ಲೂಕಿನ ನಿಟಿಲಾಕ್ಷ ಸದಾಶಿವ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಸಂಜೆ ಬಾಳ್ತಿಲ ಕುಂದಾಯ ರಕ್ತೇಶ್ವರಿ ದೇವಸ್ಥಾನ, ಕಶೆಕೋಡಿ ದೇವಸ್ಥಾನಕ್ಕೆ ತೆರಳಿ ಪ್ರಸಾದ ಸ್ವೀಕರಿಸಿದರು.