<p><strong>ಮಂಗಳೂರು</strong>: ನಗರದ ಸುತ್ತಮುತ್ತ ನಾಯಿಗಳಿಗೆ ಕೆನೈನ್ ಡಿಸ್ಟಂಪರ್ ವೈರಸ್ ಸೋಂಕು ಕಾಣಿಸಿಕೊಳ್ಳುತ್ತಿದೆ. ಇದರಿಂದ ಸಾಕುನಾಯಿ ಮಾಲೀಕರು ಆತಂಕಪಟ್ಟುಕೊಳ್ಳುವಂತಾಗಿದೆ. </p>.<p>‘ಪ್ರತಿವರ್ಷ ಬೇಸಿಗೆಯಲ್ಲಿ ಹೆಚ್ಚಾಗಿ ಈ ರೋಗ ಕಾಣಿಸಿಕೊಳ್ಳುತ್ತದೆ. ಇದು ನರಕ್ಕೆ ಸಂಬಂಧಿಸಿದ ರೋಗವಾಗಿದ್ದು, ರೋಗ ತಗುಲಿದ ಶೇ 20ರಷ್ಟು ನಾಯಿಗಳು ಮೃತಪಡುತ್ತವೆ. ಕೆಲವು ಬದುಕಿ ಉಳಿದರೂ ಶಾಶ್ವತ ಅಂಗವೈಕಲ್ಯಕ್ಕೆ ಒಳಗಾಗುತ್ತವೆ. ಈ ರೋಗ ತಡೆಗಟ್ಟಲು ಲಸಿಕೆಯೊಂದೇ ಮಾರ್ಗವಾಗಿದೆ’ ಎನ್ನುತ್ತಾರೆ ಪಶುವೈದ್ಯರು.</p>.<p>‘ನಾಯಿ ಮತ್ತು ನಾಯಿ ಜಾತಿಗೆ ಸೇರಿದ ಪ್ರಾಣಿಗಳಿಗೆ ಮಾತ್ರ ಈ ರೋಗ ಹರಡುತ್ತದೆ. ನಾಯಿಗಳ ಮೂಗಿನಿಂದ ಹರಿಯುವ ಹನಿಯಿಂದ, ಕೆಮ್ಮಿನಿಂದ ಉಳಿದ ನಾಯಿಗಳಿಗೆ ಹರಡಬಹುದು. ಪ್ರಾಣಿಪ್ರಿಯರು ನಾಯಿ ಮರಿಗಳಿಗೆ ಆರು ವಾರ ಆದ ತಕ್ಷಣ ಲಸಿಕೆ ಹಾಕಿಸಬೇಕು. ಕನಿಷ್ಠ ಎರಡು ಲಸಿಕೆಯನ್ನಾದರೂ ಹಾಕಿಸಬೇಕು. ಆದರೆ, ಲಸಿಕೆಗಳು ಉಚಿತವಾಗಿ ಲಭ್ಯವಿಲ್ಲ’ ಎಂದು ಪಶುಸಂಗೋಪನಾ ಇಲಾಖೆಯ ಪಾಲಿಕ್ಲಿನಿಕ್ನ ಉಪನಿರ್ದೇಶಕ ತಮ್ಮಯ್ಯ ಎ.ಬಿ. ತಿಳಿಸಿದರು.</p>.<p>‘ಚರ್ಮಕ್ಕೆ, ಶ್ವಾಸಕೋಶಕ್ಕೆ, ಕರುಳು ಮತ್ತು ಮಿದುಳು ಹೀಗೆ ನಾಲ್ಕು ವಿಧಗಳಲ್ಲಿ ರೋಗ ತಗುಲಬಹುದು. ಮಿದುಳಿಗೆ ತಗುಲಿದರೆ ನರ ದೌರ್ಬಲ್ಯ ಆಗುತ್ತದೆ. ಚರ್ಮಕ್ಕೆ ಬಂದರೆ ಗುಳ್ಳೆಗಳು ಆಗುತ್ತವೆ. ಈ ರೋಗ ಸಾಮಾನ್ಯವಾಗಿ ಎಲ್ಲ ವೇಳೆ ಇರುತ್ತದೆ. ಆದರೆ, ತಿಂಗಳ ಈಚೆಗೆ ಮಂಗಳೂರು ಸುತ್ತಮುತ್ತ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ. ಪ್ರತಿದಿನ ನಮ್ಮ ಆಸ್ಪತ್ರೆಗೆ 2–3 ಪ್ರಕರಣಗಳು ಬರುತ್ತಿವೆ’ ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು</strong>: ನಗರದ ಸುತ್ತಮುತ್ತ ನಾಯಿಗಳಿಗೆ ಕೆನೈನ್ ಡಿಸ್ಟಂಪರ್ ವೈರಸ್ ಸೋಂಕು ಕಾಣಿಸಿಕೊಳ್ಳುತ್ತಿದೆ. ಇದರಿಂದ ಸಾಕುನಾಯಿ ಮಾಲೀಕರು ಆತಂಕಪಟ್ಟುಕೊಳ್ಳುವಂತಾಗಿದೆ. </p>.<p>‘ಪ್ರತಿವರ್ಷ ಬೇಸಿಗೆಯಲ್ಲಿ ಹೆಚ್ಚಾಗಿ ಈ ರೋಗ ಕಾಣಿಸಿಕೊಳ್ಳುತ್ತದೆ. ಇದು ನರಕ್ಕೆ ಸಂಬಂಧಿಸಿದ ರೋಗವಾಗಿದ್ದು, ರೋಗ ತಗುಲಿದ ಶೇ 20ರಷ್ಟು ನಾಯಿಗಳು ಮೃತಪಡುತ್ತವೆ. ಕೆಲವು ಬದುಕಿ ಉಳಿದರೂ ಶಾಶ್ವತ ಅಂಗವೈಕಲ್ಯಕ್ಕೆ ಒಳಗಾಗುತ್ತವೆ. ಈ ರೋಗ ತಡೆಗಟ್ಟಲು ಲಸಿಕೆಯೊಂದೇ ಮಾರ್ಗವಾಗಿದೆ’ ಎನ್ನುತ್ತಾರೆ ಪಶುವೈದ್ಯರು.</p>.<p>‘ನಾಯಿ ಮತ್ತು ನಾಯಿ ಜಾತಿಗೆ ಸೇರಿದ ಪ್ರಾಣಿಗಳಿಗೆ ಮಾತ್ರ ಈ ರೋಗ ಹರಡುತ್ತದೆ. ನಾಯಿಗಳ ಮೂಗಿನಿಂದ ಹರಿಯುವ ಹನಿಯಿಂದ, ಕೆಮ್ಮಿನಿಂದ ಉಳಿದ ನಾಯಿಗಳಿಗೆ ಹರಡಬಹುದು. ಪ್ರಾಣಿಪ್ರಿಯರು ನಾಯಿ ಮರಿಗಳಿಗೆ ಆರು ವಾರ ಆದ ತಕ್ಷಣ ಲಸಿಕೆ ಹಾಕಿಸಬೇಕು. ಕನಿಷ್ಠ ಎರಡು ಲಸಿಕೆಯನ್ನಾದರೂ ಹಾಕಿಸಬೇಕು. ಆದರೆ, ಲಸಿಕೆಗಳು ಉಚಿತವಾಗಿ ಲಭ್ಯವಿಲ್ಲ’ ಎಂದು ಪಶುಸಂಗೋಪನಾ ಇಲಾಖೆಯ ಪಾಲಿಕ್ಲಿನಿಕ್ನ ಉಪನಿರ್ದೇಶಕ ತಮ್ಮಯ್ಯ ಎ.ಬಿ. ತಿಳಿಸಿದರು.</p>.<p>‘ಚರ್ಮಕ್ಕೆ, ಶ್ವಾಸಕೋಶಕ್ಕೆ, ಕರುಳು ಮತ್ತು ಮಿದುಳು ಹೀಗೆ ನಾಲ್ಕು ವಿಧಗಳಲ್ಲಿ ರೋಗ ತಗುಲಬಹುದು. ಮಿದುಳಿಗೆ ತಗುಲಿದರೆ ನರ ದೌರ್ಬಲ್ಯ ಆಗುತ್ತದೆ. ಚರ್ಮಕ್ಕೆ ಬಂದರೆ ಗುಳ್ಳೆಗಳು ಆಗುತ್ತವೆ. ಈ ರೋಗ ಸಾಮಾನ್ಯವಾಗಿ ಎಲ್ಲ ವೇಳೆ ಇರುತ್ತದೆ. ಆದರೆ, ತಿಂಗಳ ಈಚೆಗೆ ಮಂಗಳೂರು ಸುತ್ತಮುತ್ತ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ. ಪ್ರತಿದಿನ ನಮ್ಮ ಆಸ್ಪತ್ರೆಗೆ 2–3 ಪ್ರಕರಣಗಳು ಬರುತ್ತಿವೆ’ ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>