ಮಂಗಳೂರು: ಹೊರವಲಯದ ಮೂಲ್ಕಿ ಸಮೀಪದ ಕಿನ್ನಿಗೋಳಿಯ ಸಂಕಲ ಕರಿಯ ಎಂಬಲ್ಲಿ ಶನಿವಾರ ಬೆಳಿಗ್ಗೆ ಬೊಲೆರೊ ವಾಹನವೊಂದು ಚಾಲಕನ ನಿಯಂತ್ರಣ ಕಳೆದುಕೊಂಡು ಶಾಂಭವಿ ನದಿಗೆ ಉರುಳಿ ಬಿದ್ದಿದೆ.
ಘಟನೆಯಲ್ಲಿ ಒಬ್ಬ ಮಹಿಳೆ ಮೃತಪಟ್ಟಿದ್ದು, ಮೂವರನ್ನು ರಕ್ಷಿಸಿದ್ದಾರೆ.
ಸಚ್ಚರಿಪೇಟೆ ಬೋಳ ನಿವಾಸಿ ಡಯಾನಾ (45) ಮೃತ ಮಹಿಳೆ. ಇವರ ಪತಿ ಸ್ಟ್ಯಾನಿ ಮಸ್ಕರೇನಸ್ ವಾಹನ ಚಾಲನೆ ಮಾಡುತ್ತಿದ್ದರು. ಮಕ್ಕಳಾದ ಶೆಲ್ಟನ್ ಮತ್ತು ಶಮಿದ್ ಜೊತೆಗಿದ್ದರು. ಬೆಳಿಗ್ಗೆ 8.30ಕ್ಕೆ ಘಟನೆ ಸಂಭವಿಸಿದೆ.