‘ಖಾಸಗಿ ಆಸ್ಪತ್ರೆಗಳು ನಡೆಸುತ್ತಿರುವ ಗಂಟಲ ದ್ರವ ಮಾದರಿ ಪರೀಕ್ಷೆಯ ವರದಿಗಳಲ್ಲಿ ಎಡವಟ್ಟು ಆಗುತ್ತಿದ್ದು, ನೊಂದವರಿಗೆ ನ್ಯಾಯ ಹಾಗೂ ಇಂತಹ ಅನ್ಯಾಯಗಳನ್ನು ತಡೆಗಟ್ಟುವ ಸಲುವಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಅವರಿಗೆ ಜುಲೈ 4ರಂದು ದೂರು ನೀಡಲಾಗಿತ್ತು. ಅದರೆ, ಡಿ.2ರಂದು ಪತ್ರ ಕಳುಹಿಸಿರುವ ತನಿಖಾಧಿಕಾರಿ ಡಿ.9 ಬುಧವಾರ ನನ್ನ ಹೇಳಿಕೆಯನ್ನು ದಾಖಲಿಸಲು ತಿಳಿಸಿದ್ದರು. ಎಲ್ಲ ಹೋದ ಮೇಲೆ ನಾನು ಹಾಜರಾಗಿ ವರದಿ ಸಲ್ಲಿಸಿದರೂ ಸಮಾಜಕ್ಕೆ ಏನು ಪ್ರಯೋಜನ. ಅದಕ್ಕಾಗಿ ಇ–ಮೇಲ್ ಮೂಲಕ ನನ್ನ ಹೇಳಿಕೆ ಸಲ್ಲಿಸಿದ್ದೇನೆ’ ಎಂದು ದೂರುದಾರ ಉಮರ್ ಯು.ಎಚ್. ತಿಳಿಸಿದ್ದಾರೆ.