ಬಾಗಲಕೋಟೆ ಜಿಲ್ಲಾ ಬಾದಾಮಿ ತಾಲ್ಲೂಕು ನರಿನೂರ ಗ್ರಾಮ ಮತ್ತು ಹೊಸೂರು ಗ್ರಾಮಗಳ 32 ಮಂದಿ ಕಟ್ಟಡ ನಿರ್ಮಾಣದ ವಲಸೆ ಕಾರ್ಮಿಕರು ಎರಡು ಗ್ರಾಮಗಳಲ್ಲಿ ಸಿಲುಕಿಕೊಂಡಿದ್ದರು. ಈ ಬಗ್ಗೆ ಶಾಸಕರ ವಾರ್ರೂಮ್ ಮತ್ತು ಜಿಲ್ಲಾಡಳಿತ, ಕಂದಾಯ ಇಲಾಖೆಯ ಅಧಿಕಾರಿಗಳ ಮೂಲಕ ಮಾತುಕತೆ ನಡೆಸಿ, ಅವರನ್ನು ಪುತ್ತೂರಿನಿಂದ ಕೆಎಸ್ಆರ್ಟಿಸಿ ಬಸ್ ಮೂಲಕ ಸ್ವಗ್ರಾಮಗಳಿಗೆ ತಲುಪಿಸುವ ವ್ಯವಸ್ಥೆಯನ್ನು ಮಾಡಲಾಗಿದೆ.