ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಬಾಳಿಲ ಗ್ರಾಮದ ಪ್ರಗತಿಪರ ಕೃಷಿಕ ಪಿಜಿಎಸ್ಎನ್ ಪ್ರಸಾದ್ ಇವರು ಮಳೆ ಮಾಪನ ಮಾಡುವ ವಿಶಿಷ್ಟ ಹವ್ಯಾಸ ಬೆಳೆಸಿಕೊಂಡು ಮಳೆ ಪ್ರಮಾಣ ದಾಖಲಿಸುತ್ತಾ ಬಂದಿದ್ದಾರೆ. 1976ರಿಂದ ಇಲ್ಲಿಯವರೆಗೆ ಪ್ರತಿದಿನ ಮಳೆ ಮಾಪನ ಮಾಡಿ ತಮ್ಮ ‘ಮಳೆಯೊಂದಿಗೆ ಮಾತುಕತೆ’ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ವಲಯದಲ್ಲಿ ಗುರುತಿಸಿಕೊಂಡಿರುವ ಇವರು ‘ಊರಿನಲ್ಲಿ ಮಳೆ ಲೆಕ್ಕದ ಮೇಷ್ಟ್ರು’ ಎಂದೇ ಹೆಸರಾಗಿದ್ದಾರೆ.