ಮಂಗಳೂರು: ಕುವೈಟ್ನಲ್ಲಿ ಭಾನುವಾರ ಸಂಭವಿಸಿದ ಅಗ್ನಿ ದುರ್ಘಟನೆಯಲ್ಲಿ ಮೃತಪಟ್ಟ ನಗರದ ಪಡೀಲ್-ಕೊಡಕ್ಕಲ್ನ ಸತೀಶ್ ಕೋಚು ಶೆಟ್ಟಿ(45) ಪಾರ್ಥೀವ ಶರೀರ ಬುಧವಾರ ನಗರಕ್ಕೆ ಆಗಮಿಸಲಿದೆ.
ಅವರು ಅಲ್-ಸಬ್ರಿಯಾ ರಿಫೈನರಿ ಆಯಿಲ್ ಆ್ಯಂಡ್ ಗ್ಯಾಸ್ ಕಂಪನಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಜೂನ್ 14ರಂದು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದಾಗ ವಿಷಕಾರಿ ಅನಿಲ ಬಿಡುಗಡೆಯಾಗಿ ಅಗ್ನಿ ಅವಘಡ ಸಂಭವಿಸಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಮೃತಪಟ್ಟಿದ್ದರು.
ಕುವೈಟ್ ಕೇರಳ ಮುಸ್ಲಿಂ ಅಸೋಸಿಯೇಷನ್ನ ಮ್ಯಾಗ್ನೆಟ್ ತಂಡದ ಪ್ರಯತ್ನದಿಂದ ಮೃತದೇಹ ಅಲ್ ಜಝೀರಾ ವಿಮಾನದಲ್ಲಿ ಬರಲಿದೆ ಎಂದು ಸಂಘಟನೆ ತಿಳಿಸಿದೆ.