ಉಜಿರೆ: ರಾಜ್ಯದಲ್ಲಿ ‘ಕೊರೊನಾ ಕರ್ಫ್ಯೂ’ ಜಾರಿಗೊಳಿಸಿರುವುದರಿಂದ ಧರ್ಮಸ್ಥಳ ಯಕ್ಷಗಾನ ಮಂಡಳಿಯ ಈ ವರ್ಷದ (ಮೇ 24ರ ವರೆಗಿನ) ಎಲ್ಲಾ ಸೇವೆ ಬಯಲಾಟಗಳನ್ನು ರದ್ದುಗೊಳಿಸಲಾಗಿದೆ.
ಮೇ 24 ಹತ್ತನಾವಧಿ ಜಾತ್ರೆ ಬಳಿಕ ಧರ್ಮಸ್ಥಳದಲ್ಲಿ ಮೂರು ದಿನ ಸೇವೆ ಬಯಲಾಟ ಪ್ರದರ್ಶನದ ನಂತರ ಈ ವರ್ಷದ ಬಯಲಾಟ ಸೇವೆ ಮುಕ್ತಾಯಗೊಳ್ಳುತ್ತದೆ. ಮುಂದಿನ ದೀಪಾವಳಿ ನಂತರ ಸೇವೆ ಬಯಲಾಟ ಪ್ರಾರಂಭಗೊಳ್ಳಲಿದೆ ಎಂದು ಪ್ರಕಟಣೆ ತಿಳಿಸಿದೆ