ಮೃತರು ಪತ್ನಿ, ಒಬ್ಬರು ಪುತ್ರ, ಇಬ್ಬರು ಪುತ್ರಿಯರು ಮತ್ತು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ಕೋಟ, ಪುತ್ತೂರು, ಕುಂದಾಪುರ, ಮಂಗಳೂರು, ಮಣಿಪಾಲ ವಿವಿಧ ಕಡೆ ಸರ್ಕಾರಿ ಪಶುವೈದ್ಯರಾಗಿ ಸೇವೆ ಸಲ್ಲಿಸಿದ್ದರು. ಕೋಟದ ಪ್ರತಿಷ್ಠಿತ ‘ಕಾರಂತ ಹುಟ್ಟೂರ ಪ್ರಶಸ್ತಿ’ ಹುಟ್ಟು ಹಾಕಲು ಕಾರಣಕರ್ತರಲ್ಲೊಬ್ಬರಾಗಿ, ಕಾರಂತ ಹುಟ್ಟೂರ ಪ್ರತಿಷ್ಠಾನದ ಸದಸ್ಯರಾಗಿ, ಸ್ಥಳೀಯ ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದರು. ಕೋಟತಟ್ಟು ಗ್ರಾಮ ಪಂಚಾಯಿತಿ ಬಯಲು ಶೌಚಾಲಯಮುಕ್ತ ಗ್ರಾಮದ ಸಾಕಾರಕ್ಕೆ ಮುನ್ನುಡಿ ಬರೆದ ಮಹನೀಯರಾಗಿದ್ದರು.