ಶನಿವಾರ ಇಲ್ಲಿ ನಡೆದ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಭಾಗವಹಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಡಿ.ಕೆ. ಶಿವಕುಮಾರ್ ಅವರೇ ನೀವು ಉಪಮುಖ್ಯಮಂತ್ರಿಯಾಗಿ ಸರ್ಕಾರ ನಡೆಸುತ್ತಿದ್ದೀರಿ, ನೀವಾಗಲಿ, ಮುಖ್ಯಮಂತ್ರಿಯಾಗಲಿ, ಏಕವಚನದ ಪದ ಬಳಸಬೇಡಿ. ವೈಯಕ್ತಿಕವಾಗಿ ಮಾತನಾಡಬೇಡಿ. ಅಸಮಾಧಾನ ಇದ್ದರೆ ಪಕ್ಷದ (ಜೆಡಿಎಸ್) ಬಗ್ಗೆ ಮಾತನಾಡಿ. ಈ ಮಾತನ್ನು ಕುಮಾರಸ್ವಾಮಿ ಅವರಿಗೂ ನಾನು ಹೇಳಿದ್ದೇನೆ. ಸರ್ಕಾರ ಎಡವಿದಲ್ಲಿ, ಆ ಬಗ್ಗೆ ಮಾತಾಡೋಣ’ ಎಂದರು.