‘ಬೈರಿಕಟ್ಟೆ ಸೌಹಾರ್ದಕ್ಕೆ ಹೆಸರಾಗಿದೆ. ಶಾಮಿಯಾನ ಹಾಕಲು, ವಿದ್ಯುತ್ ದುರಸ್ತಿ ಕಾರ್ಯಕ್ಕೆ ಹಿಂದೂ, ಮುಸ್ಲಿಂ ಎನ್ನದೆ ಎಲ್ಲ ಧರ್ಮೀಯರ ಮನೆಗಳಿಗೆ ಹೋಗುತ್ತೇನೆ. ನಮ್ಮ ಗೆಳೆಯರ ಬಳಗದಲ್ಲಿ ಎಲ್ಲ ಸಮುದಾಯದವರೂ ಇದ್ದಾರೆ. ಊರಿನಲ್ಲಿ ಅನ್ಯೋನ್ಯ ಬಾಂಧವ್ಯ ಇದೆ. ಮುಸ್ಲಿಂ ಸ್ನೇಹಿತರಿಗಾಗಿ ಇಫ್ತಾರ್ ಕೂಟ ಹಮ್ಮಿಕೊಂಡಿದ್ದೆ’ ಎಂದು ನವ ವಿವಾಹಿತ ಚಂದ್ರಶೇಖರ ಪ್ರತಿಕ್ರಿಯಿಸಿದರು.