ಪಾಣೆಮಂಗಳೂರು ಸಮೀಪದ ಮೆಲ್ಕಾರ್– ರೆಂಗೇಲು ನಿವಾಸಿ ಹಾಫೀಲ್ ಮುಹಮ್ಮದ್ ತೌಸೀಫ್ ಹಿಮಮಿ (35) ಮೃತರು. ಪಂಪ್ವೆಲ್ ಮಸೀದಿಯಲ್ಲಿ ತಕ್ವ ಧಾರ್ಮಿಕ ತರಬೇತಿ ನೀಡಲು ಅವರು ಕೆ.ಸಿ.ರೋಡ್ ಕಡೆಯಿಂದ ಸ್ಕೂಟರ್ನಲ್ಲಿ ಬರುತ್ತಿದ್ದರು. ಆಗ ಎದುರಿನಿಂದ ಬರುತ್ತಿದ್ದ ಬಸ್ ಅವರಿಗೆ ಡಿಕ್ಕಿ ಹೊಡೆದಿದೆ. ರಸ್ತೆಗೆ ಉರುಳಿದ ತೌಸೀಫ್ ಹಿಮಮಿ ದೇಹದ ಮೇಲೆ ಬಸ್ಸಿನ ಚಕ್ರ ಹರಿದಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ.